Advertisement

ಬಾಲಕಿ ನೆರವಿಗೆ ಬಂದ ಸಚಿವೆ ನಿರ್ಮಲಾ ಸೀತಾರಾಮನ್‌

09:55 PM Jun 06, 2022 | Team Udayavani |

ನವದಹೆಲಿ: ಕೊರೊನಾದಿಂದ ತನ್ನ ಹೆತ್ತವರನ್ನು ಕಳೆದುಕೊಂಡ ಭೋಪಾಲ್‌ನ ವನಿತಾ ಪಾಠಕ್‌ ಎಂಬ ಬಾಲಕಿಯೊಬ್ಬಳಿಗೆ ಆಕೆಯ ತಂದೆ ಮಾಡಿದ್ದ 29 ಲಕ್ಷ ರೂ. ಸಾಲವನ್ನು ಹಿಂದಿರುಗಿಸುವಂತೆ ಪದೇ ಪದೇ ಬ್ಯಾಂಕಿನಿಂದ ನೋಟಿಸ್‌ ಜಾರಿಯಾಗುತ್ತಿದ್ದು, ವಿಷಯ ತಿಳಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದಾರೆ.

Advertisement

ಬಾಲಕಿಗೆ ತಲುಪಿರುವ ನೋಟಿಸ್‌ನ ಪ್ರತಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಅದನ್ನು ಕೇಂದ್ರ ಹಣಕಾಸು ಇಲಾಖೆಗೂ ಟ್ಯಾಗ್‌ ಮಾಡಿ, ಈ ಪ್ರಕರಣವನ್ನು ಕೂಲಂಕಶವಾಗಿ ಪರಿಶೀಲಿಸುವಂತೆ ತಿಳಿಸಿದ್ದಾರೆ.

ಅಪ್ಪ- ಅಮ್ಮನನ್ನು ಕಳೆದುಕೊಂಡ ಬೆನ್ನಿಗೇ 10ನೇ ತರಗತಿ ಪರೀಕ್ಷೆ ಬರೆದಿದ್ದ ವನಿತಾ, ಶೇ. 99.80ರಷ್ಟು ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next