Advertisement

ಮಂಡ್ಯದ ಬಗ್ಗೆ ಜೆಡಿಎಸ್ ಗೆ ಭಯ ಆರಂಭವಾಗಿದೆ: ಸಚಿವ ನಾರಾಯಣ ಗೌಡ

03:41 PM Dec 17, 2022 | Team Udayavani |

ಚಿಕ್ಕಮಗಳೂರು: ಮಂಡ್ಯ ಜೆಡಿಎಸ್ ಭದ್ರಕೋಟೆ ಎನ್ನುತ್ತಿದ್ದರು, ಈಗ ಅವರಿಗೆ ಟೆನ್ಷನ್ ಆಗಿದೆ ಎಂದು ಚಿಕ್ಕಮಗಳೂರಿನಲ್ಲಿ ಸಚಿವ ನಾರಾಯಣ ಗೌಡ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್. ಪೇಟೆ ಗೆದ್ದಾಗ ಟೀಕೆ ಮಾಡಲು ಆರಂಭಿಸಿದ್ದರು. ನಾನು ಈಗ ದೊಡ್ಡ ಪಕ್ಷಕ್ಕೆ ಬಂದಿದ್ದೇನೆ, ಜನರ ಬೆಂಬಲವಿದೆ. ಡಬಲ್ ಇಂಜಿನ್ ಸರ್ಕಾರ ಇದೆ. ಅವರಿಗೆ ಏನೂ ಮಾಡಲು ಆಗುತ್ತಿಲ್ಲ ಎಂದರು.

ಇದನ್ನೂ ಓದಿ:ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ಇಲ್ಲ; ಗಮನ ಹರಿಸಲು ಡಾ.ಸುಧಾಕರ್‌ ಸೂಚನೆ

ನಾನು ಚುನಾವಣೆಗೆ ನಿಂತಾಗ ನನ್ನ‌ ಮನೆಗೆ ಕಲ್ಲು ಹೊಡೆದು ಬೆಂಕಿ ಹಾಕಿದರು. ಆದರೂ ನನ್ನನ್ನು ಸೋಲಿಸಲು ಆಗಲಿಲ್ಲ. ನನಗೆ ಚಪ್ಪಲಿಯಲ್ಲಿ ಹೊಡೆದರು, ಆದರೆ ನನ್ನನ್ನು ಸೋಲಿಸಲು ಆಗಲಿಲ್ಲ. ಈ ಬಾರಿಯೂ ನಾಲ್ಕರಿಂದ ಐದು ಕ್ಷೇತ್ರ ಗೆಲ್ಲುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next