Advertisement

ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಹೆಚ್ಚಿನ ಎಫ್ ಡಿಐಗೆ ಆಹ್ವಾನ: ಮುರುಗೇಶ್ ನಿರಾಣಿ

06:43 PM Oct 17, 2021 | Team Udayavani |

ದುಬೈ: ಕರ್ನಾಟಕದಲ್ಲಿ ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿರುವ ವಿಪುಲ ಅವಕಾಶಗಳನ್ನು ಸದ್ಬಳಕೆ  ಮಾಡಿಕೊಂಡು ಈ ಕ್ಷೇತ್ರದಲ್ಲಿ ಹೆಚ್ಚಿನ ವಿದೇಶಿ ನೇರ ಹೂಡಿಕೆ ( ಎಪ್ ಡಿಐ) ಮಾಡಲು ಉದ್ಯಮೆದಾರರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.

Advertisement

ವಿಶ್ವ ದುಬೈಎಕ್ಸ್ ಪೋ – 2020 ನಲ್ಲಿ  ” ಕರ್ನಾಟಕದಲ್ಲಿ ಅಂತರಿಕ್ಷೆ , ರಕ್ಷಣೆ ಹಾಗೂ ವೈಮಾನಿಕ ವಲಯದಲ್ಲಿರು ಅವಕಾಶಗಳು ಕುರಿತ‌‌ ವಿಚಾರ ಸಂಕಿರಣದಲ್ಲಿ‌ ಮಾತನಾಡಿದ ಬೃಹತ್ ಮತ್ತು ‌ಮಧ್ಯಮ ಕೈಗಾರಿಕಾ ಸಚಿವ ‌ಮುರುಗೇಶ್ ಆರ್ ನಿರಾಣಿ ಅವರು, ಈ ವಲಯದಲ್ಲಿ ರಾಜ್ಯವು ಸಾಧಿಸಿರುವ ‘ಪ್ರಗತಿಯ ಚಿತ್ರಣವನ್ನು’ ತೆರೆದಿಟ್ಟರು.

ಈ ಕ್ಷೇತ್ರಗಳಲ್ಲಿ ರಾಜ್ಯವು ಹೆಚ್ಚಿನ ಸಾಮರ್ಥ್ಯ ಹೊಂದಿದ್ದು,”ಕರ್ನಾಟಕವು ಭಾರತದ ಅತಿದೊಡ್ಡ ಅಂತರಿಕ್ಷ ‌ಕ್ಲಸ್ಟರ್ ಆಗಿರುವುದಲ್ಲದೆ, ಭಾರತದಲ್ಲಿ  ಬೃಹತ್ ಎಲೆಕ್ಟ್ರಿಕಲ್ ಯಂತ್ರಗಳ 2 ನೇ ಅತಿದೊಡ್ಡ ಉತ್ಪಾದನಾ ‌ರಾಜ್ಯವಾಗಿದೆ ಎಂದು ಹೇಳಿದರು.

ಭಾರತದಲ್ಲಿ ಸುಮಾರು 60% ಯಂತ್ರೋಪಕರಣಗಳನ್ನು ಉತ್ಪಾದಿಸಲಾಗುತ್ತದೆ. ನಮ್ಮ ರಾಜ್ಯವು ದೇಶದ 2 ನೇ ಅತಿದೊಡ್ಡ ಚಿಪ್ ವಿನ್ಯಾಸ ಕೇಂದ್ರವಾಗಿದೆ. ಉದ್ಯಮಕ್ಕೆ ಸಿದ್ಧವಾಗಿರುವ ಮಾನವ ಸಂಪನ್ಮೂಲವನ್ನು ಒದಗಿಸಲು ನಾವು ಡಸಾಲ್ಟ್ ಸಿಸ್ಟಮ್ಸ್ ಸಹಭಾಗಿತ್ವದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಅಂತರಿಕ್ಷ ಮತ್ತು ರಕ್ಷಣಾ ವಲಯಕ್ಕೆ ಸಹಾಯಕವಾಗುತ್ತಿರುವ ಸಣ್ಣ ಕೈಗಾರಿಕೆಗಳ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು, ಈ ಕ್ಷೇತ್ರಗಳನ್ನು ಮುನ್ನಡೆಸಲು ‌ರಾಜ್ಯ ಸರ್ಕಾರ  ಎಲ್ಲಾ ‌ರೀತಿಯ ನೆರವು ನೀಡುತ್ತಿದೆ ‌ಎಂದು‌ ತಿಳಿಸಿದರು ‌

Advertisement

“ಕರ್ನಾಟಕದಲ್ಲಿ ‌ ಸುಮಾರು 2000 ಎಸ್‌ಎಂಇಗಳ ಪ್ರಬಲ ನೆಲೆಯನ್ನು ಹೊಂದಿದೆ, ಇದು ಅಂತರಿಕ್ಷ  ಮತ್ತು ರಕ್ಷಣಾ ವಲಯದಲ್ಲಿರುವ ಉಪ-ಗುತ್ತಿಗೆ ಕೆಲಸಗಳನ್ನು ನಿರ್ವಹಿಸುತ್ತದೆ. ಈ ವಲಯಕ್ಕೆ ಸರ್ಕಾರ ಎಲ್ಲಾ ರೀತಿಯಲ್ಲೂ  ಪ್ರೋತ್ಸಾಹ ಮತ್ತು ‌ ಬೆಂಬಲ ಕೊಟ್ಟ ‌ಪರಿಣಾಮ, ರಾಜ್ಯದಲ್ಲಿ ತಮ್ಮ ನೆಲೆಯನ್ನು ಸ್ಥಾಪಿಸುವುದರ ಜೊತೆಗೆ ‌ವಿಸ್ತರಣೆಯನ್ನು ಮತ್ತಷ್ಟು ಹೆಚ್ಚಿಸಲು ‌ ಅನುಕೂಲವಾಗಿದೆ. ಪರಿಣಾಮ  ಹೆಚ್ಚು  ಉದ್ಯಮೆದಾರರಿಗೆ  ‌ನಮ್ಮ ರಾಜ್ಯದ ಕಡೆ ಆಕರ್ಷಿತವಾಗಿದೆ ಎಂದು ನಿರಾಣಿ ಅವರು ಪ್ರಶಂಸಿದರು.

“ಭಾರತೀಯ ಸ್ಟಾರ್ಟ್ ಅಪ್‌ಗಳು ಅನುಭವಗಳಿಂದ ಕಲಿಯುತ್ತಾರೆ. ಭವಿಷ್ಯದಲ್ಲಿ ಅವರ ನಿರ್ಧಾರಗಳಿಗೆ ಇದು ಮಾರ್ಗದರ್ಶನ ನೀಡಲು ಉತ್ತಮ ವೇದಿಕೆಯಾಗಲಿದೆ” ಎಂಬ‌ ವಿಶ್ವಾಸವನ್ನು ‌ಅವರು ವ್ಯಕ್ತಪಡಿಸಿದರು.

ಈ ವೇದಿಕೆಯಲ್ಲಿ ಆರಂಭವಾದ ಸಂವಾದಗಳು, ವಿಚಾರಗಳ ವಿನಿಮಯವು ಮುಂದುವರಿಯುತ್ತದೆ. ದುಬೈ ಎಕ್ಸ್‌ಪೋ 2020 ಅನ್ನು ವಿವಿಧ ‌ರಾಜ್ಯಗಳು, ಉದ್ದಿಮೆದಾರರು ‌ ಮತ್ತು ಇತರ ಪಾಲುದಾರರನ್ನು ಭೇಟಿಯಾಗಿ  ಸಂವಾದಿಸಲು ಮತ್ತು ಸಹಯೋಗಿಸಲು ವೇದಿಕೆ ಒದಗಿಸಿದ್ದಕ್ಕಾಗಿ ಸಚಿವರು ಪ್ರಶಂಸಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next