Advertisement

ಸಚಿವ ಹೆಗಡೆ ಉತ್ತರ ಕನ್ನಡಕ್ಕೆ ಕ್ಯಾನ್ಸರ್‌ ಇದ್ದಂತೆ : ಅಸ್ನೋಟಿಕರ್‌

01:10 PM Mar 17, 2019 | Team Udayavani |

ಕುಮಟಾ : ಸಚಿವ ಅನಂತ್‌ ಕುಮಾರ್‌ ಹೆಗಡೆ ಉತ್ತರ ಕನ್ನಡಕ್ಕೆ ಕ್ಯಾನ್ಸರ್‌ ಇದ್ದಂತೆ ಎಂದು ಮಾಜಿ ಸಚಿವ, ಸಂಭಾವ್ಯ ಜೆಡಿಎಸ್‌ ಅಭ್ಯರ್ಥಿ ಆನಂದ್‌ ಅಸ್ನೋಟಿಕರ್‌ ಅವರು ಏಕವಚನದಲ್ಲೇ ತೀವ್ರ ವಾಗ್ಧಾಳಿ ನಡೆಸಿದ್ದಾರೆ. 

Advertisement

ಭಾನುವಾರ ನಡೆನದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶ ದಲ್ಲಿ ಮಾತನಾಡಿದ ಅಸ್ನೋಟಿಕರ್‌ ಅನಂತ್‌ ಕುಮಾರ್‌ ಹೆಗಡೆ ಜನರ ರಕ್ತ ಹೀರುತ್ತಿದ್ದಾನೆ. ಮೋದಿ, ಹಿಂದುತ್ವವೊಂದೇ ಅವನ ಅಸ್ತ್ರ ,ಆದರೆ ನಮ್ಮದು ಅಭಿವೃದ್ಧಿ ಅಸ್ತ್ರ ಎಂದರು. 

ಪರೇಶ್‌ ಮೇಸ್ತಾ ಸಾವಿನ ವಿಚಾರದಲ್ಲೂ ರಾಜಕೀಯ ದುರ್ಬಳಕೆ ಮಾಡಿಕೊಂಡಿದ್ದಾನೆ. ಹಿಂದುಳಿದ ವರ್ಗಗಳ ಯುವಕರನ್ನು ದುರ್ಬಳಕೆ ಮಾಡಿಕೊಂಡಿದ್ದು, ಅಮಾಯಕರು ಕೇಸ್‌ಗಳನ್ನು ಹಾಕಿಕೊಂಡು ಪರದಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next