Advertisement

ತಾಕತ್ತಿದ್ದರೆ ಕೆಂಪಣ್ಣ ಲೋಕಾಯುಕ್ತಕ್ಕೆ ದೂರು ನೀಡಲಿ: ಕಾರಜೋಳ

06:14 PM Sep 27, 2022 | Team Udayavani |

ವಿಜಯಪುರ: ಕಾಂಗ್ರೆಸ್ ಪ್ರೇರಿತವಾಗಿ ಆಧಾರ ರಹಿತವಾಗಿ ಲಂಚದ ಆರೋಪ ಮಾಡುತ್ತಿರುವ ಕೆಂಪಣ್ಣ ಅವರಿಗೆ ನಿಜಕ್ಕೂ ತಾಕತ್ತಿದ್ದರೆ, ದಮ್ ಇದ್ದರೆ ಕೂಡಲೇ ತಮ್ಮ ಬಳಿ ಇರುವ ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸವಾಲು ಹಾಕಿದರು.

Advertisement

ನಗರದಲ್ಲಿ ನಾಗಠಾಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಶೇ.40 ಕಮಿಷನ್ ಆರೋಪ ಮಾಡುವ ಕೆಂಪಣ್ಣ ಹಾಗೂ ಆತನ ಜೊತೆಗಿರುವವರು ಯಾವ ಕೆಲಸಕ್ಕೆ ಲಂಚ ಕೊಟ್ಟಿದ್ದಾರೆ ಎಂದು ದಾಖಲೆ ಸಮೇತ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಕೆಂಪಣ್ಣ ಕಾಂಟ್ರಾಕ್ಟರ್ ಅಲ್ಲ, ಕಾಂಗ್ರೆಸ್ ನಾಯಕರ ಮನೆಯಲ್ಲಿ ಕುಳಿತೇ ಕೆಂಪಣ್ಣನಿಂದ ಅರ್ಜಿ ಬರೆಸಲಾಗಿದೆ. ಕೆಂಪಣ್ಣ, ಅವರನ್ನ ಬೆಂಬಲಿಸುತ್ತಿರುವ ಗುತ್ತಿಗೆದಾರರು ಯಾವ ಕೆಲಸ ಪಡೆದಿದ್ದಾರೆ, ಯಾವ ಕೆಲಸ ಮಾಡಿದ್ದಾರೆ. ಮಾಡಿದ ಕಾಮಗಾರಿಗೆ ಬಿಲ್ ಆಗಿಲ್ಲ, ಯಾರಿಗೆ ಲಂಚ ನೀಡಿದ್ದಾರೆ ಎಂದೆಲ್ಲ ನಿಖರವಾಗಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next