Advertisement

ಕೋಲಾರದಲ್ಲೂ ಸಿದ್ದುಗೆ ಸೋಲು ಖಚಿತ: ಸಚಿವ ಗೋವಿಂದ ಕಾರಜೋಳ

11:10 PM Nov 14, 2022 | Team Udayavani |

ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಸೋಲುವುದು ಖಚಿತ. ಅವರಿಗೆ ಯಾವ ಕ್ಷೇತ್ರವೂ ಸಿಗುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಕೋಲಾರದಿಂದ ಸ್ಪರ್ಧೆ ಮಾಡಿದರೂ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್‌ ಈಗ ಮುಳುಗುವ ಹಡಗು. ಹೀಗಾಗಿ ಈ ಪಕ್ಷದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಗೆಲುವು ಸಾಧಿಸುವುದಿಲ್ಲ. ದೇಶದಲ್ಲಿ ಕಾಂಗ್ರೆಸ್‌ ಪರಿಸ್ಥಿತಿ ಶೋಚನೀಯವಾಗಿದೆ.

ದೊಡ್ಡ ಮನೆ ಎನಿಸಿಕೊಂಡರೂ ದೀಪ ಹಚ್ಚುವವರು ಇಲ್ಲದಂತಾಗಿದೆ. ಅಲ್ಲಿನ ಮನಸ್ಥಿತಿಗೆ ಅನೇಕ ಹಿರಿಯ ನಾಯಕರು ಪಕ್ಷವನ್ನು ತೊರೆದಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯ ಅವರಿಗೆ ಎಲ್ಲಿಯೂ ಸುರಕ್ಷಿತ ಜಾಗ ಸಿಗುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next