Advertisement

ಸಚಿವ ಬೈರತಿ ಬಸವರಾಜ ಆಪ್ತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

11:22 AM Jan 15, 2022 | Team Udayavani |

ಬೆಂಗಳೂರು: ಸಚಿವ ಬೈರತಿ ಬಸವರಾಜ ಅವರ ಆಪ್ತನ ಮೇಲೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಈ ಸಂಬಂಧ ಸಚಿವ ಬೈರತಿ ಬಸವರಾಜ ಅವರ ಆಪ್ತ ವಿಜ್ಞಾನಪುರ ಪುಷ್ಪರಾಜ್‌ ಅವರ ಪತ್ನಿ ಮಾಲತಿ ಅವರು ದೂರು ನೀಡಿದ್ದು, ತನಿಖೆ ನಡೆ ಯುತ್ತಿದೆ ಎಂದು ಪೊಲೀಸರು ಹೇಳಿದರು.

ಜ.6ರಂದ ರಾತ್ರಿ 8.30ರ ಸುಮಾರಿಗೆ ವಿಜ್ಞಾ ನಪುರ ನಿವಾಸಿ ಪುಷ್ಪರಾಜ್‌ ಅವರು ಹೋಗುವಾಗ ಹೆಲ್ಮೆಟ್‌ ಧರಿಸಿ ಬಂದಿದ್ದ ನಾಲ್ವರು ಆರೋ ಪಿಗಳು ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಅದರಿಂದ ಅವರ ಮುಖ ಹಾಗೂ ದೇಹದ ಇತರೆ ಭಾಗಗಳಿಗೆ ಪೆಟ್ಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪುಷ್ಪರಾಜ್‌ ಅವರು ಬೈರತಿ ಬಸವರಾಜ ಅವರ ಆಪ್ತರಾಗಿದ್ದು, ಏರಿ ಯಾದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿ ದ್ದರು ಎಂದು ಪೊಲೀಸರು ಹೇಳಿದರು. ಅನುಮಾನ: ಹಲ್ಲೆ ಸಂಬಂಧ ಪುಷ್ಪರಾಜ್‌ ಅವರ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದು, ಈ ಹಿಂದೆ ಮಾಜಿ ಕಾರ್ಪೊರೇಟರ್‌ ಎಸ್‌.ರಾಜು ಅವರ ಜತೆ ಕೆಲವೊಂದು ವಿಚಾರಗಳಿಗೆ ವಾಗ್ವಾದ ನಡೆದಿತ್ತು. ಹೀಗಾಗಿ ಅವರೇ ಹಲ್ಲೆ ನಡೆಸಿರುವ ಸಾಧ್ಯತೆ ಎಂದು ಪುಷ್ಪರಾಜ್‌ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next