Advertisement
ತಾಲೂಕಿನ ದೋಣಿಗಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿಯಿಂದ ಭೂಕುಸಿತಕ್ಕೆ ಒಳಗಾಗಿ ತೋಟ, ಗದ್ದೆ ಜಾಗ ವೀಕ್ಷಿಸಿ ಮಾತನಾಡಿದ ಅವರು, ರಾಜ್ಕಮಲ್ ಕಂಪನಿ ಮಾಡಿದ ಎಡವಟ್ಟಿ ನಿಂದ 35ಕ್ಕೂ ಹೆಚ್ಚು ಎಕರೆ ಕಾಫಿ, ಮೆಣಸು, ಭತ್ತ ಬೆಳೆಯುತ್ತಿದ್ದ ಜಾಗ ಮಣ್ಣುಪಾಲಾಗಿರುವ ಮಾಹಿತಿ ನನಗೆ ದೊರಕಿದೆ. ಇಲ್ಲಿ ಪುನಃ ಬೆಳೆ ಬೆಳೆಯಲಾರದಂಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಮೀನು ಕಳೆದುಕೊಂಡವರ ಕುರಿತು ಸರಿಯಾಗಿ ಮಾಹಿತಿ ಪಡೆದು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
Related Articles
Advertisement
ಸಚಿವರ ಮುಂದೆ ಸಂತ್ರಸ್ತರ ಕಣ್ಣೀರು: ಇದೇವೇಳೆ ಸಚಿವರ ಮುಂದೆ ಕಣ್ಣೀರು ಹಾಕಿದ ಸಂತ್ರಸ್ತರು, ಬಹುತೇಕರಿಗೆ ಇಲ್ಲಿ ಸ್ವಲ್ಪ ಜಾಗ ಇದ್ದು, ಅದರಲ್ಲೇ ಕಷ್ಟಪಟ್ಟು ಕಾಫಿ, ಮೆಣಸು, ಅಡಕೆ, ಭತ್ತವನ್ನು ಬೆಳೆಯುತ್ತಿದ್ದೆವು. ಇದೀಗ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಮಾಡಿದ ತಪ್ಪಿನಿಂದ ವಿನಾಕಾರಣ ನಾವು ಬಲಿಯಾಗಬೇಕಾಗಿದೆ ಎಂದು ಹೇಳಿದರು.
ನಮ್ಮ ಜೀವನಕ್ಕೆ ಆಧಾರವಾಗಿದ್ದ ಜಮೀನು ಇಲ್ಲವಾಗಿದೆ. ನಾವು ಮುಂದೆ ಏನು ಮಾಡುವುದು, ದಯವಿಟ್ಟು ನಮಗೆ ಬದಲಿ ಭೂಮಿ ನೀಡಬೇಕು, ಸೂಕ್ತ ಪರಿಹಾರ ನೀಡಬೇಕು ಎಂದು ಕಣ್ಣೀರು ಹಾಕಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಪಂ ಸಿಇಒ ಕಾಂತರಾಜ್, ಉಪವಿಭಾಗಾಧಿಕಾರಿ ಪ್ರತೀಕ್ ಬಾಯಲ್, ತಹಶೀಲ್ದಾರ್ ಜಯಕುಮಾರ್, ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಜರಿದ್ದರು.