Advertisement

ಸದೃಢ ಸಮಾಜಕ್ಕೆ ಗುಣಮಟ್ಟದ ಶಿಕ್ಷಣ ಅಗತ್ಯ: ಸಚಿವ ಡಾ|ಅಶ್ವತ್ಥನಾರಾಯಣ

01:00 AM Dec 18, 2022 | Team Udayavani |

ಮೂಡುಬಿದಿರೆ : ಗುಣ ಮಟ್ಟದ ಶಿಕ್ಷಣ ನೀಡಲು ಸರಕಾರ ಬದ್ಧವಾಗಿದ್ದು ವಿದ್ಯಾರ್ಥಿ ಕೇಂದ್ರಿತ ವಾಗಿ ಹಲವು ಸುಧಾರಣೆಗಳಾಗಿವೆ. ಯುವಕ ಯುವತಿಯರಿಗೆ ಉತ್ತಮ ಭವಿಷ್ಯ ಕಲ್ಪಿಸಿಕೊಡಲು ಸ್ಕಿಲ್‌ ಕನೆಕ್ಟ್ ಫ್ಲಾಟ್‌ ಎಂಬ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥ ನಾರಾಯಣ ಅವರು ಹೇಳಿದ್ದಾರೆ.

Advertisement

ಮೂಡುಬಿದಿರೆ ಹೊರವಲಯದ ಬನ್ನಡ್ಕದಲ್ಲಿ ಸ್ಥಾಪನೆಯಾಗಿರುವ ಮಂಗಳೂರು ವಿ.ವಿ.ಯ 6ನೇ ಘಟಕ ಕಾಲೇಜನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಇ-ಗವರ್ನೆನ್ಸ್‌, ಯೂನಿಫೈಡ್‌ ಯೂನಿ ವರ್ಸಿಟಿ ಕಾಲೇಜ್‌ ಮ್ಯಾನೇಜೆ¾ಂಟ್‌, ಇ-ಆಫೀಸ್‌, ಸೇವಾ ಸಿಂಧು ಮುಂತಾದ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆಯನ್ನು ತೋರಲಾಗುತ್ತಿದೆ ಎಂದರು.

ವೆಬ್‌ಸೈಟ್‌ಅನಾವರಣ
ಶಾಸಕ ಉಮಾನಾಥ್‌ ಕೋಟ್ಯಾನ್‌ ಘಟಕ ಕಾಲೇಜಿನ ವೆಬ್‌ಸೈಟ್‌ ಅನಾ ವರಣಗೊಳಿಸಿ ಮಾತನಾಡಿ, ಕಳೆದ ಸಾಲಿನಲ್ಲಿ ಪ್ರಾರಂಭವಾದ ಕಾಲೇಜು ತರಗತಿಗಳಲ್ಲಿ ಈ ವರ್ಷ 100ರಷ್ಟು ದಾಖಲಾತಿ ಆಗಿದೆ. ಸುಸಜ್ಜಿತ ಕಾಲೇಜು ಕ್ಯಾಂಪಸ್‌ ಕಟ್ಟಲು ಐದು ಎಕ್ರೆ ಜಾಗವನ್ನು ವಿ.ವಿ.ಗೆ ಹಸ್ತಾಂತರಿಸ ಲಾಗುವುದು ಎಂದರು.

ವಿ.ವಿ. ಕುಲಪತಿ ಪ್ರೊ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಗ್ರಾಮೀಣ ಪ್ರದೇಶಕ್ಕೆ ಕಾಲೇಜು ಒದಗಿಸಿಕೊಡಲು ಶಾಸಕರು ಅವಿರತ ಶ್ರಮವಹಿಸಿದ್ದಾರೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂಬುದರ ಜತೆಗೆ ಸಬ್‌ ಕಾ ಪ್ರಯಾಸ್‌ ಕೂಡ ಅಗತ್ಯ ಎಂದರು.

ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷೆ ಸಿ.ಎಸ್‌. ಕಲ್ಯಾಣಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದಯಾನಂದ ಪೈ, ಪುರಸಭಾಧ್ಯಕ್ಷ ಪ್ರಸಾದ್‌ ಕುಮಾರ್‌, ವಿ.ವಿ. ಹಣಕಾಸು ಅಧಿಕಾರಿ ಡಾ| ವೈ. ಸಂಗಪ್ಪ , ವಿವಿಧ ವಿಭಾಗಗಳ ಡೀನ್‌ಗಳು, ಸಿಂಡಿಕೇಟ್‌ ಸದಸ್ಯರು ಉಪಸ್ಥಿತರಿದ್ದರು.

Advertisement

ಕುಲಸಚಿವ ಪ್ರೊ| ಕಿಶೋರ್‌ ಕುಮಾರ್‌ ಸಿ.ಕೆ. ಸ್ವಾಗತಿಸಿದರು. ಆಶಾ ಶ್ಯಾಲೆಟ್‌ ಡಿ’ಸೋಜಾ ಮತ್ತು ಸುಲೋಚನಾ ಪಚ್ಚನಡ್ಕ ನಿರೂಪಿಸಿ ದರು. ಘಟಕ ಕಾಲೇಜಿನ ಸಂಯೋಜಕ ಡಾ| ಗಣಪತಿ ಗೌಡ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next