Advertisement

ರಾಗಿ ಮೆದೆಗೆ ಬೆಂಕಿ

03:06 PM Jan 23, 2021 | Team Udayavani |

ರಾಮನಗರ: ತಾಲೂಕಿನ ನಂಜಾಪುರ ಗ್ರಾಮದಲ್ಲಿ ಗುರುವಾರ ರಾತ್ರಿ 6 ರಾಗಿ ಮೆದೆಗಳಿಗೆ ಬೆಂಕಿಬಿದಿದ್ದು, ಅಪಾರ ನಷ್ಟವಾಗಿದೆ. ರಾಗಿ ಮತ್ತು ಜಾನುವಾರು ಮೇವು ಬೆಂಕಿಗೆ ಆಹುತಿಯಾಗಿದೆ.

Advertisement

ನಂಜಾಪುರ ಗ್ರಾಮದ ಶನೇಶ್ವರ ದೇವಾಲಯದ ಬಳಿ ಕಣ ಮಾಡಿ ಒಕ್ಕಣೆ ಮಾಡಲು ಏಳೆಂಟು ಮಂದಿ ರೈತರು ರಾಗಿ ಫ‌ಸಲನ್ನು ತಂದು ಮೆದೆ ಹಾಕಿದ್ದರು. ಗುರುವಾರ ರಾತ್ರಿ ಯಾರೋ ಕಿಡಿಗೇಡಿಗಳು ರಾಗಿ ಮೆದೆಗೆ ಬೆಂಕಿ ಹಚ್ಚಿದ್ದಾರೆ ಎಂಬ ಅನುಮಾನವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅಧಿಕಾರ-ಅನುದಾನ ದೊರೆತರೆ ತಾಪಂ ಬಲಿಷ್ಠ

ಲಕ್ಕೋಜನಹಳ್ಳಿ ಬೋರೇಗೌಡ, ದೊಡ್ಡನ ಹಳ್ಳಿ ನಾಗೇಶ್‌, ಮಹದೇವು, ಕರಿಯಪ್ಪ, ನಂಜಾಪುರ ಮಹ ದೇವಪ್ಪ ಎಂಬ ರೈತರಿಗೆ ಈ ಮೆದೆಗಳು ಸೇರಿದ್ದವು. ಮೆದೆ ಗ ಳನ್ನು ಉಳಿಸಿಕೊಳ್ಳಲು ಅಗ್ನಿಶಾಮಕದಳ ನಡೆಸಿದ ಪ್ರಯತ್ನ ವಿಫ‌ಲವಾ ಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next