Advertisement
ಹುಳಿಯಾರಿನ ಎಂಪಿಎಸ್ ಶಾಲಾ ಆವರಣದಲ್ಲಿ ಭಾನುವಾರ ತಾಲೂಕು ಕೃಷಿ ಇಲಾಖೆ, ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬರ್ಡ್ಸ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ 2019-20ನೇ ಸಾಲಿನ ಕೃಷಿ ಅಭಿಯಾನದಡಿ ಏರ್ಪಡಿಸಿದ್ದ ಹೋಬಳಿ ಮಟ್ಟದ ಕೃಷಿ ವಸ್ತು ಪ್ರದರ್ಶನ, ರೈತರೊಂದಿಗೆ ಸಂವಾದ ಹಾಗೂ ರೈತರ ಮೇಳ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಸಿಒಡಿ ತನಿಖೆ: ತಾಲೂಕಿನ ರೈತರಿಗೆ ಅನುಕೂಲ ಆಗಲೆಂದು ತೆಂಗಿನಕಾಯಿ ಬೋರ್ಡ್ಗೆ 3 ಟ್ರಾಕ್ಟರ್, 2 ಟ್ಯಾಂಕರ್, 10 ಲೋಡ್ ಗೊಬ್ಬರ ಕೊಡಿಸಲಾಗಿತ್ತು. ಗೊಬ್ಬರ ಉಚಿತವಾಗಿ ಕೊಟ್ಟು ಟ್ರಾಕ್ಟರ್, ಟ್ಯಾಂಕರ್ ಬಾಡಿಗೆ ಆಧಾರದ ಮೇಲೆ ಕೊಡಿ ಎಂದರೆ ಅದನ್ನೆಲ್ಲಾ ತೆಗೆದುಕೊಂಡ ವ್ಯಕ್ತಿ ಅದೆಲ್ಲೋದನೋ ಗೊತ್ತಾಗಲಿಲ್ಲ. ಹಾಗಾಗಿ ಇದನ್ನು ಸಿಒಡಿ ತನಿಖೆಗೆ ಕೇಳಲಾಗಿದೆ ಎಂದು ತಿಳಿಸಿದರು.
2 ಲಕ್ಷ ಮೆಟ್ರಿಕ್ ಟನ್ ಮಾತ್ರ ರಾಗಿ ಖರೀದಿ: ಬೆಂಬಲ ಬೆಲೆಯಲ್ಲಿ 2 ಲಕ್ಷ ಮೆಟ್ರಿಕ್ ಟನ್ ರಾಗಿ ಮಾತ್ರ ಖರೀದಿಸಲು ಸರ್ಕಾರ ನಿರ್ಧರಿಸಿದ್ದು, 2 ಲಕ್ಷ ಗುರಿ ತಲುಪಿದ ನಂತರ ರಾಗಿ ಕೊಡುವವರು ಇದ್ದರೂ ಸ್ಥಗಿತಗೊಳಿಸಲಾಗುತ್ತೆ. ಹಾಗಾಗಿ ರೈತರು ಬೇಗ ಹೆಸರು ನೋಂದಾಯಿಸಿ ರಾಗಿ ಮಾರಬೇಕು. ಈ ಯೋಜನೆ ಎಲ್ಲಾ ರೈತರಿಗೆ ಅನುಕೂಲವಾಗಲೆಂದು ಎಕರೆಗೆ 15 ಕ್ವಿಂಟಲ್ ಖರೀದಿಸುವ ನಿಯಮ ಬದಲಾಯಿಸಿ 10 ಕ್ವಿಂಟಲ್ಗೆ ಇಳಿಸಲಾಗಿದೆ ಎಂದು ಹೇಳಿದರು.
ತಾಪಂ ಅಧ್ಯಕ್ಷೆ ಚೇತನಾ ಗಂಗಾಧರ್, ಜಿಪಂ ಸದಸ್ಯರಾದ ಕಲ್ಲೇಶ್, ವೈ.ಸಿ.ಸಿದ್ದರಾಮಯ್ಯ, ಮಂಜುಳಮ್ಮ, ತಾಪಂ ಉಪಾಧ್ಯಕ್ಷ ಯತೀಶ್, ಸದಸ್ಯರಾದ ಏಜೆಂಟ್ ಕುಮಾರ್, ಕೇಶವಮೂರ್ತಿ, ಟಿ.ವಿ.ತಿಮ್ಮಯ್ಯ, ಶ್ರೀಹರ್ಷ, ಕಲ್ಯಾಣಿಬಾಯಿ, ಕಲಾವತಿ, ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನ, ತೋಟಗಾರಿಗೆ ಉಪನಿರ್ದೆಶಕ ರಘು, ಮಣ್ಣು ವಿಜ್ಞಾನಿಗಳಾದ ಡಾ.ಅನಿತಾ. ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ.ಶ್ರೀನಿವಾಸ್, ಸಹಾಯಕ ಕೃಷಿ ನಿರ್ದೇಶಕ ಡಾ.ಡಿ.ಆರ್.ಹನುಮಂತರಾಜು ಮತ್ತಿತರರು ಇದ್ದರು.
ಮರುಭೂಮಿ ಆಗುತ್ತೆ ಎಚ್ಚರ: ಸಮುದ್ರ ತೀರದ ತೆಂಗು, ಅಡಕೆ ಬೆಳೆಯನ್ನು ಚಿಕ್ಕನಾಯಕನಹಳ್ಳಿ ತಾಲೂಕಿಗೆ ತಂದು ಅವುಗಳ ಉಳಿವಿಗಾಗಿ ಅಂತರ್ಜಲ ಬರಿದು ಮಾಡಿದ್ದರಿಂದ ರಾಜ್ಯದಲ್ಲಿ ಮರುಭೂಮಿ ಆಗುವ ತಾಲೂಕಿನ ಪಟ್ಟಿಯಲ್ಲಿ ಚಿ.ನಾ.ಹಳ್ಳಿ ಮೊದಲ ಸ್ಥಾನದಲ್ಲಿದೆ. ಇದರ ಬಗ್ಗೆ ಎಚ್ಚೆತ್ತು ಕಡಿಮೆ ನೀರಿನಿಂದ ಬೆಳೆಯುವ ಗೋಡಂಬಿ, ಖರ್ಜೂರ ಮತ್ತಿತರ ಬೆಳೆ ಬೆಳೆಯಿರಿ. ಸಾಧ್ಯವಾದಷ್ಟು ನೀರು ಆವಿಯಾಗುವುದನ್ನು ತಡೆಯಲು ಹನಿ ನೀರಾವರಿ ಬಳಸಿ. ಇಲ್ಲವಾದಲ್ಲಿ ಬೆಳೆಗೂ ನೀರು ಸಿಗಲ್ಲ, ಕುಡಿಯುವುದಕ್ಕೂ ನೀರು ಸಿಗಲ್ಲ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಸಿದರು.