Advertisement

ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆ

06:55 AM Jan 17, 2019 | Team Udayavani |

ಹರಿಹರ: ತಾಲೂಕಿನ ಹನಗವಾಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಜಗದೀಶಪ್ಪ ಬಣಕಾರ್‌ ಅಧ್ಯಕ್ಷರಾಗಿ, ವೀರಮ್ಮ ಬಸವರಾಜಪ್ಪ ರಾಯಾಪುರದ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

Advertisement

ಚುನಾವಣಾಧಿಕಾರಿ ನಿವೇದಿತ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದ್ದು, ನಿರ್ದೇಶಕರಾಗಿ ಡಿ.ನಾಗರಾಜಪ್ಪ, ಕೆ.ವಿ ರುದ್ರಮುನಿ, ಎಸ್‌. ವೀರಪ್ಪ, ಕೆ. ಜಯಪ್ಪ, ಎಚ್.ವಿ ಗುರು, ಬಿ.ಜೆ ಬಸವನಗೌಡ, ಎಚ್.ಸಂತೋಷ್‌, ಬಿ.ಆರ್‌ ಮಂಜುಳಾ, ಬಸವಂತಪ್ಪ ಭೋವಿ, ಬಿ. ಪರಶುರಾಮ್‌ ನೇಮಕವಾದರು.

ನೂತನ ಅಧ್ಯಕ್ಷ ಜಗದೀಶಪ್ಪ ಮಾತನಾಡಿ, ಗ್ರಾಮದ ಪ್ರತಿಯೊಬ್ಬ ಹಾಲು ಉತ್ಪಾದಕರ ಸಹಕಾರದಿಂದ ಗ್ರಾಮದಲ್ಲಿ ಬಿ.ಎಂ.ಸಿ ನಿರ್ಮಾಣವಾಗಿದೆ. ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕಿದೆ. ರಾಜ್ಯ ಒಕ್ಕೂಟದಿಂದ ರೈತರಿಗೆ ಸಿಗುವಂತಹ ಎಲ್ಲಾ ಸೌಲಭ್ಯ ಕೊಡಿಸುವಲ್ಲಿ ತಾವು ಪ್ರಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಡೈರಿ ಕಾರ್ಯದರ್ಶಿ ಬಿ. ಸುಮಾ, ಹಾಲು ಪರೀಕ್ಷಕ ಬಿ. ದೇವೇಂದ್ರಪ್ಪ, ಸಿಬ್ಬಂದಿ ಡಿ. ಪವನ್‌, ಬಿ. ಮಂಜುನಾಥ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next