Advertisement

ಉಗ್ರರಿಂದ ಬ್ಯಾಂಕ್‌ ಲೂಟಿ ಯತ್ನ ವಿಫ‌ಲಗೊಳಿಸಿದ ಭದ್ರತಾ ಪಡೆಗಳು

03:58 PM Apr 28, 2017 | udayavani editorial |

ಶ್ರೀನಗರ : ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯಲ್ಲಿನ ಜಮ್ಮು ಕಾಶ್ಮೀರ ಬ್ಯಾಂಕ್‌ ಶಾಖೆಯನ್ನು ಲೂಟಿಗೈವ ಉಗ್ರರ ಯತ್ನವನ್ನು ಭದ್ರತಾ ಪಡೆಗಳಿಂದು ವಿಫ‌ಲಗೊಳಿಸಿದವು.

Advertisement

ಅನಂತ್‌ನಾಗ್‌ ಜಿಲ್ಲೆಯ ಮೆಹಂದಿ ಕದಲ್‌ ಎಂಬಲ್ಲಿನ ಜಮ್ಮು ಕಾಶ್ಮೀರ ಬ್ಯಾಂಕಿನ ತೆಹಶೀಲ್‌ ಕಚೇರಿಗೆ ಇಬ್ಬರು ಶಸ್ತ್ರಧಾರಿ ಉಗ್ರರು ಇಂದು ಶುಕ್ರವಾರ ಮಧ್ಯಾಹ್ನ ಲಗ್ಗೆ ಇಟ್ಟರು. ಈ ಉಗ್ರರನ್ನು ಸೆರೆ ಹಿಡಿಯಲು ಭದ್ರತಾ ಪಡೆಗಳು ಮುಂದಾದವಾದರೂ ಉಗ್ರರು ಗುಂಡು ಹಾರಿಸಲು ತೊಡಗಿದ ಕಾರಣ ಅದು ಸಾಧ್ಯವಾಗಲಿಲ್ಲ. 

ಉಗ್ರರ ಗುಂಡಿಗೆ ಸಿಆರ್‌ಪಿಎಫ್ ಹೆಡ್‌ ಕಾನ್‌ಸ್ಟೆಬಲ್‌ ಒಬ್ಬರು ಗಾಯಗೊಂಡರು. ಇಬ್ಬರು ಉಗ್ರರಲ್ಲಿ ಬಂದೂಕು ಹೊಂದಿದ್ದ ಉಗ್ರನು ಪರಾರಿಯಾಗುವಲ್ಲಿ ಯಶಸ್ವಿಯಾದ. ಆದರೆ ಇನ್ನೊಬ್ಬನನ್ನು ಭದ್ರತಾ ಪಡೆಗಳು ಸೆರೆ ಹಿಡಿದವು. 

ಬಂಧಿತ ಉಗ್ರನನ್ನು  ಶೋಪಿಯಾನ್‌ ಜಿಲ್ಲೆಯ ಋಷಿಪುರದ ನಿವಾಸಿ ಮುನೀಬ್‌ ಅಹ್ಮದ್‌ ಮಲ್ಲ  ಎಂದು ಗುರುತಿಸಲಾಗಿದೆ. 

ಹೆಚ್ಚಿನ ವಿವರಗಳನ್ನು ಎದುರು ನೋಡಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next