Advertisement

Kerala; ಅರುಣಾಚಲದ ಬಾಣಸಿಗನ ಥಳಿಸಿ ಹತ್ಯೆ: 10 ಮಂದಿ ಬಂಧನ

03:58 PM Apr 07, 2024 | Team Udayavani |

ಎರ್ನಾಕುಲಂ: ಕೇರಳದ ಎರ್ನಾಕುಲಂನಲ್ಲಿ ಸ್ಥಳೀಯ ರೆಸ್ಟೋರೆಂಟ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಅರುಣಾಚಲ ಪ್ರದೇಶದ ವಲಸೆ ಕಾರ್ಮಿಕನನ್ನು ಗುಂಪೊಂದು ಕಂಬಕ್ಕೆ ಕಟ್ಟಿ ಥಳಿಸಿ ಹತ್ಯೆಗೈದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.

Advertisement

ಪೊಲೀಸರ ಪ್ರಕಾರ, ಹತ್ಯೆಗೀಡಾದ ವ್ಯಕ್ತಿ ಅಶೋಕ್ ದಾಸ್ ಎಂದು ಗುರುತಿಸಲಾಗಿದೆ. ಸ್ನೇಹಿತೆಯನ್ನು ಭೇಟಿಯಾಗಿ ನಿವಾಸದಿಂದ ಹೊರಹೋಗುತ್ತಿದ್ದಂತೆ ಗುಂಪು ಮುವಾಟ್ಟುಪುಳದಲ್ಲಿ ದಾಳಿ ಮಾಡಿ ಕೃತ್ಯ ಎಸಗಿದೆ.

ಅಶೋಕ್ ದಾಸ್ ಹತ್ಯೆಗೆ ಕಾರಣವೇನು ಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.ಜನರ ಗುಂಪೊಂದು ಹೊಡೆದು ಕೊಂದಿರುವುದು ದೃಢಪಟ್ಟಿದೆ ಮತ್ತು ನಾವು 10 ಜನರನ್ನು ಬಂಧಿಸಿದ್ದೇವೆ. ಕೊಲೆ ಪ್ರಕರಣ ದಾಖಲಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಶೋಕ್ ದಾಸ್ ಪಾರ್ಥಿವ ಶರೀರವನ್ನು ಇಂದು ಅರುಣಾಚಲ ಪ್ರದೇಶದಲ್ಲಿ  ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು.  ಹತ್ಯೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next