Advertisement

ಮೆಟ್ರೋ; ಹೆಚ್ಚುವರಿ ಭೂಸ್ವಾಧೀನಕ್ಕೆ ಒತ್ತು

06:17 AM Jun 02, 2020 | Lakshmi GovindaRaj |

ಬೆಂಗಳೂರು: ಸರ್ಕಾರದ ಬಹು ನಿರೀಕ್ಷಿತ ಕೆ.ಆರ್‌. ಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ರೀಚ್‌-2ಬಿ) ನಡುವೆ “ನಮ್ಮ ಮೆಟ್ರೋ’ ನಿರ್ಮಾಣಕ್ಕೆ ಸಂಬಂಧಿಸಿ  ದಂತೆ ಅಗತ್ಯವಿರುವ 3,723 ಚ.ಮೀ. ಹೆಚ್ಚುವರಿ  ಭೂಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೆ.ಆರ್‌. ಪುರ ಮೆಟ್ರೋ ನಿಲ್ದಾಣದಿಂದ ಹೆಬ್ಟಾಳ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಾಣಗೊಳ್ಳಲಿದೆ.

Advertisement

ಒಟ್ಟು 10,584 ಕೋಟಿ ವೆಚ್ಚದ ಈ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಭೂಸ್ವಾಧೀನ ಕಾರ್ಯ ನಡೆದಿದೆ. ಅಗತ್ಯವಿದ್ದ ಹೆಚ್ಚುವರಿ ಭೂಸ್ವಾಧೀನಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಈಗ ಅಧಿಸೂಚನೆ ಹೊರಡಿಸಿದ್ದು, ಇದರಿಂದ ಕಾಮಗಾರಿ ಚುರುಕುಗೊಳ್ಳಲಿದೆ. ಬೈಯಪ್ಪನಹಳ್ಳಿಯಿಂದ ವೀರಣ್ಣನ ಪಾಳ್ಯದವರೆಗೆ ಮೆಟ್ರೋ ರೈಲು ಮಾರ್ಗದ ನಿರ್ಮಾಣದ ಉದ್ದೇಶಕ್ಕಾಗಿ ಹೆಚ್ಚುವರಿ ಭೂಮಿ ಬೇಕಾಗಿದ್ದು, ಬೆಂಗಳೂರು ಪೂರ್ವ ತಾಲೂಕಿನ ಬೆನ್ನಿಗಾನಹಳ್ಳಿ, ಕೆ.ಜಿ. ಬಾಣಸವಾಡಿ, ಹೊರಮಾವು,  ಬೆಂಗ ಳೂರು ಉತ್ತರ ತಾಲ್ಲೂಕಿನ ಹೆಣ್ಣೂರು, ನಾಗವಾರದಲ್ಲಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗುತ್ತದೆ.

ಈ ಮಾರ್ಗಕ್ಕಾಗಿ ಸರ್ಕಾರದ 58 ಹಾಗೂ 203 ಖಾಸಗಿ ಆಸ್ತಿ ಸೇರಿ ಒಟ್ಟು 261 ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಬೇಕಾಗಿತ್ತು. ಕಳೆದ ಮಾಚ್‌ವರೆಗೆ ಒಟ್ಟು 190 ಆಸ್ತಿಗಳನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಹೆಚ್ಚುವರಿ ಭೂಸ್ವಾಧೀನಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಕೈಹಾಕಲಿದೆ.  ಅಂದಹಾಗೆ, ಬೆಂಗಳೂರು  ಹೊರವರ್ತುಲ ದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಬಹುನಿರೀಕ್ಷಿತ ಈ ಮಾರ್ಗದ ನಿರ್ಮಾಣ ಕಾರ್ಯವನ್ನು 2024ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next