Advertisement

ಹಸ್ತಾಂತರ ತಡೆಗಾಗಿ ಆರೋಪಿ ಮೆಹುಲ್‌ ಚೋಕ್ಸಿ ಲಂಚ

08:56 PM Jan 13, 2023 | Team Udayavani |

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ) ವಂಚನೆ ಪ್ರಕರಣದ ಆರೋಪಿ ಮೆಹುಲ್‌ ಚೋಕ್ಸಿ,ಭಾರತಕ್ಕೆ ತನ್ನ ಹಸ್ತಾಂತರವನ್ನು ವಿಳಂಬಗೊಳಿಸುವುದಕ್ಕಾಗಿ ಆ್ಯಂಟಿಗುವಾ ಸರ್ಕಾರದ ಕೆಲವು ಅಧಿಕಾರಿಗಳಿಗೆ ಲಂಚ ನೀಡಿದ್ದಾನೆ ಎನ್ನುವ ವಿಚಾರ ಬಹಿರಂಗಗೊಂಡಿದೆ.

Advertisement

ಆರ್ಥಿಕ ಅಪರಾಧಗಳ ತನಿಖಾಧಿಕಾರಿ ಕೆನ್ನೆತ್‌ ರಿಜಾಕ್‌, ಈ ಮಾಹಿತಿ ನೀಡಿದ್ದಾರೆ. ಇನ್‌ಸ್ಪೆಕ್ಟರ್‌ ಹೆನ್ರಿಗೆ, ಚೋಕ್ಸಿ ಲಂಚ ನೀಡುತ್ತಿದ್ದು, ಹಸ್ತಾಂತರ ಪ್ರಕ್ರಿಯೆ ವಿಳಂಬಗೊಳಿಸಲು ಜಡ್ಜ್ ಕಾನ್ಲಿಫ್ ಕ್ಲಾರ್ಕ್‌ ಅವರ ಮೇಲೂ ಪ್ರಭಾವ ಬೀರಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಭಾರತ ಚೋಕ್ಸಿಯನ್ನು ಹಸ್ತಾಂತರಿಸುವಂತೆ ಆ್ಯಂಟಿಗ್ವಾ ಸರ್ಕಾರದ ಜತೆಗೆ ಮಾತುಕತೆ ನಡೆಸುತ್ತಿದ್ದದ್ದನ್ನು ಗಮನಿಸಿ, ಅಲ್ಲಿಂದ ಕ್ಯೂಬಾಗೆ ಹಾರಲು ಯತ್ನಿಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next