Advertisement

ಹುರಿಯತ್‌ ನಾಯಕರನ್ನು ಮಾತುಕತೆಗೆ ಸೇರಿಸಲು ಮೆಹಬೂಬ ಆಗ್ರಹ

04:04 PM Jul 28, 2018 | Team Udayavani |

ಜಮ್ಮು : ಅಧಿಕಾರ ದಾಹದಲ್ಲಿ ತನ್ನ ಪೀಪಲ್ಸ್‌ ಡೆಮೊಕ್ರಾಟಿಕ್‌ ಪಕ್ಷ (ಪಿಡಿಪಿ) ಒಡೆಯುವುದರ ವಿರುದ್ಧ ಕೇಂದ್ರಕ್ಕೆ ಈ ಹಿಂದೆ ಎಚ್ಚರಿಕೆ ನೀಡಿದ್ದ ಪಕ್ಷದ ಮುಖ್ಯಸ್ಥೆ ಮೆಹಬೂಬ ಮುಫ್ತಿ ಇದೀಗ ಕಾಶ್ಮೀರ ವಿಷಯದಲ್ಲಿ ಹುರಿಯತ್‌ ನಾಯಕರನ್ನು ಮಾತುಕತೆಗೆ ಸೇರಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.

Advertisement

‘ರಮ್ಜಾನ್‌ ಸಮಯದಲ್ಲಿ ನಾನು ಕದನ ವಿರಾಮಕ್ಕೆ ಮುತುವರ್ಜಿ ವಹಿಸಿದ್ದೆ; ಹುರಿಯತ್‌ ಬಗ್ಗೆ ಕೇಂದ್ರ ಸರಕಾರ ಧನಾತ್ಮಕ ನಿಲುವು ತೋರಬೇಕೆಂದು ನಾನೀಗ ಕೋರುತ್ತೇನೆ; ಕಾಶ್ಮೀರ ವಿಷಯದಲ್ಲಿ ಹುರಿಯತ್‌ ನಾಯಕರನ್ನು ನಾನು ಮಾತುಕತೆಯ ವೇದಿಕೆಗೆ ಕರೆತರುತ್ತೇನೆ’ ಎಂದು ಮೆಹಬೂಬ ಮುಫ್ತಿ ಅವರು ರಾಲಿಯೊಂದರಲ್ಲಿ ಮಾತನಾಡುತ್ತಾ ಹೇಳಿದರು. 

‘ಪಿಡಿಪಿಯನ್ನು ಒಡೆಯವ ಕೇಂದ್ರ ಯತ್ನ ಅತ್ಯಂತ ವಿನಾಶಕಾರಿಯಾದೀತು’ ಎಂದು ಮೆಹಬೂಬ ಅವರು ಕೇಂದ್ರಕ್ಕೆ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಪಿಡಿಪಿ ನಾಯಕಿ ಬಿಜೆಪಿಯನ್ನು ನೇರವಾಗಿ ಹೆಸರಿಸಿ ದೂರಿಲ್ಲವಾದರೂ ಆಕೆಯ ಗುರಿ ಬಿಜೆಪಿ ಆಗಿತ್ತೆನ್ನುವುದು ಸ್ಪಷ್ಟವಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next