Advertisement

ಸಿದ್ದಾಪುರ: ಮಳೆಗಾಲದ ಸಿದ್ಧತೆಗೆ ಪೂರ್ವಭಾವಿ ಸಭೆ

01:08 PM May 19, 2022 | Team Udayavani |

ಸಿದ್ದಾಪುರ: ಮಳೆಗಾಲದಲ್ಲಿ ಯಾವುದೇ ಹಾನಿಗಳು ಆಗದಂತೆ ನೋಡಿಕೊಳ್ಳಬೇಕು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಸಂಬಂಧಿಸಿದ ಅಧಿಕಾರಿಗಳು ತೆಗೆದುಕೊಳ್ಳಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಇರಬೇಕು. ಜನತೆಯ ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಆಸ್ತಿ ಸಂರಕ್ಷಣೆ ತೀರಾ ಮುಖ್ಯವಾಗಿದೆ. ಈ ಕುರಿತು ಇಲಾಖೆಗಳ ನಡುವೆ ಸಮನ್ವಯತೆಯಿಂದ ಕೆಲಸ ಮಾಡಿ ಎಂದು ಉಪವಿಭಾಗಾಧಿಕಾರಿ ದೇವರಾಜ ಹೇಳಿದರು.

Advertisement

ಅವರು ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಮಳೆಗಾಲದ ಪೂರ್ವ ಸಿದ್ಧತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಲಾಖೆಯ ನಡುವೆ ಸಮನ್ವಯದ ಕೊರತೆ ಆಗಬಾರದು ಎನ್ನುವ ಕಾರಣಕ್ಕೆ ಸಭೆ ಕರೆಯಲಾಗಿದೆ. ತಾಲೂಕು ಹಾಗೂ ಪಂಚಾ¿åತ ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅವರು ಎಲ್ಲರ ಸಂಪರ್ಕ ಇಟ್ಟುಕೊಂಡು ಕಾಳಜಿಯಿಂದ ಕೆಲಸ ಮಾಡಬೇಕಾಗಿದೆ. ಎಲ್ಲಿ ರಸ್ತೆಗಳ ಕುಸಿತ ಆಗಬಹುದು, ಮರಗಳು ಬೀಳಬಹುದು ಎಂಬುದನ್ನು ಗುರುತಿಸಿ ಅಗತ್ಯ ಕ್ರಮ ತೆಗೆದುಕೊಳ್ಳಿ. ರಸ್ತೆಯ ಗಟಾರು ಸ್ವತ್ಛ ಮಾಡಬೇಕು. ಹಳ್ಳಗಳಲ್ಲಿ ನೀರು ಹರಿಯುವುದಕ್ಕೆ ಉಂಟಾಗುವ ತೊಂದರೆ ಪರಿಹರಿಸಬೇಕು ಎಂದರು.

ಮುಖ್ಯವಾಗಿ ಹೆಸ್ಕಾಂ ಮತ್ತು ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯವರು ಒಟ್ಟಾಗಿ ಕೆಲಸ ಮಾಡಬೇಕು. ಮಳೆಗಾಲದಲ್ಲಿ ಬೀಳಬಹುದಾದ ಮರಗಳನ್ನು ಗುರುತಿಸಿ ತೆರವುಗೊಳಿಸಿ. ಹೆಸ್ಕಾಂ ಇಲಾಖೆಯವರು ಅಗತ್ಯವಾಗಿರುವ ಕಂಬಗಳು ಹಾಗೂ ಇತರ ಸಾಮಗ್ರಿಗಳನ್ನು ವಿವಿಧ ಪ್ರದೇಶದಲ್ಲಿ ದಾಸ್ತಾನು ಇಟ್ಟುಕೊಳ್ಳಬೇಕು. ತಕ್ಷಣದಲ್ಲಿ ದುರಸ್ತಿ ಮಾಡುವುದಕ್ಕೆ ಬೇಕಾಗಿರುವ ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.

ಕಾಳಜಿ ಕೇಂದ್ರದ ಕುರಿತು ಗಮನ ಇಟ್ಟುಕೊಳ್ಳಬೇಕು. ಅಲ್ಲಿಯ ಶಾಲಾ ಶಿಕ್ಷಕರು ಸಿದ್ಧತೆಯಲ್ಲಿರಬೇಕು. ಅಕ್ಷರ ದಾಸೋಹದವರೇ ಆಹಾರದ ವ್ಯವಸ್ಥೆ ಮಾಡಬೇಕು. ಗ್ರಾಪಂ ಮಟ್ಟದಲ್ಲಿ ಸಾರ್ವಜನಿಕವಾಗಿ ಒಂದು ಸ್ವಯಂ ಸೇವಕರ ತಂಡ ರಚಿಸಿಕೊಂಡು ಸಂಪರ್ಕದಲ್ಲಿ ಇರಬೇಕು. ಎಲ್ಲಾ ಸಮಯದಲ್ಲಿಯೂ ನಮ್ಮಿಂದಲೇ ಎಲ್ಲ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದರು. ತಹಶೀಲ್ದಾರ್‌ ಸಂತೋಷ ಭಂಡಾರಿ ಮಾತನಾಡಿ, ಮಾಡಬೇಕಾಗಿರುವ ಕ್ರಮಗಳ ಕುರಿತಾಗಿ ಮಾಹಿತಿ ನೀಡಲಾಗಿದೆ ಎಂದರು.

Advertisement

ತಾಪಂ ಇಓ ಪ್ರಶಾಂತ ರಾವ್‌, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next