Advertisement

ವಿಮಾನ ಪ್ರಯಾಣಿಕನಿಗೆ ವೈದ್ಯೆಯ ಆರೋಗ್ಯ ನೆರವು

12:17 AM Nov 26, 2022 | Team Udayavani |

ಮಂಗಳೂರು: ದುಬಾೖಯಿಂದ ಮಂಗಳೂರಿಗೆ ಬರುತ್ತಿದ್ದ ಸ್ಪೈಸ್‌ಜೆಟ್‌ ವಿಮಾನದಲ್ಲಿ ಅಸ್ವಸ್ಥಗೊಂಡ ಪ್ರಯಾಣಿಕರೊಬ್ಬರಿಗೆ ಮಂಗಳೂರಿನ ವೈದ್ಯೆ ಡಾ|ತಾಜೀಶ್‌ ಅವರು ಸಕಾಲದಲ್ಲಿ ಚಿಕಿತ್ಸೆ ನೀಡಿದ ಘಟನೆ ಇತ್ತೀಚೆಗೆ ಸಂಭವಿಸಿದೆ.

Advertisement

ಸಂಜೆ 4.20ಕ್ಕೆ ದುಬಾೖಯಿಂದ ಹೊರಡಬೇಕಿದ್ದ ಸ್ಪೈಸ್‌ ಜೆಟ್‌ ವಿಮಾನವು ಕಾರಣಾಂತರದಿಂದ ರಾತ್ರಿ 7.20ಕ್ಕೆ ಹೊರಟಿತ್ತು. ಸುಮಾರು 8.30ರ ವೇಳೆಗೆ ಪ್ರಯಾಣಿಕರೊಬ್ಬರು ತೀವ್ರ ಅಸ್ವಸ್ಥಗೊಂಡಿದ್ದು,
ವೈದ್ಯರಿದ್ದರೆ ಪರೀಕ್ಷಿಸುವಂತೆ ಪೈಲಟ್‌ ಸೂಚನೆ ಹೊರಡಿಸಿದರು.

ಆಗ ಅದೇ ವಿಮಾನದಲ್ಲಿ ಮಂಗಳೂರಿನ ಕುಲಶೇಖರದ ವೈದ್ಯೆ ಡಾ| ತಾಜೀಶ್‌ ಕೂಡ ಪ್ರಯಾಣಿಸುತ್ತಿದ್ದರು. ತತ್‌ಕ್ಷಣ ಅಸ್ವಸ್ಥಗೊಂಡಿದ್ದ ಪ್ರಯಾಣಿಕನ ನೆರವಿಗೆ ಡಾ| ತಾಜೀಶ್‌ ಧಾವಿಸಿದರು ಹಾಗೂ ಸಹ ಪ್ರಯಾಣಿಕರ ಸಹಾಯದಿಂದ ಚಿಕಿತ್ಸೆ ನೀಡಿದರು. ಪರಿಣಾಮವಾಗಿ ಕೆಲವೇ ನಿಮಿಷದಲ್ಲಿ ಪ್ರಯಾಣಿಕ ಚೇತರಿಸಿಕೊಂಡರು ಎನ್ನಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next