Advertisement

ಎಂ.ಸಿ.ಎಂ.ಸಿ. ಕಚೇರಿ ಉದ್ಘಾಟನೆ

02:16 PM Mar 28, 2019 | Team Udayavani |

ಬದಿಯಡ್ಕ : ಲೋಕಸಭೆ ಚುನಾವಣೆ ಸಂಬಂಧ ಮೀಡಿಯಾ ಸರ್ಟಿಫಿಕೇಷನ್‌ ಸಮಿತಿ ಕಚೇರಿ ಮತ್ತು ಮೀಡಿಯಾ ನಿರೀಕ್ಷಣೆ ಕೇಂದ್ರ (ಎಂ.ಸಿ.ಎಂ.ಸಿ.) ಆರಂಭಗೊಂಡಿದೆ. ಜಿಲ್ಲಾ ಮಾಹಿತಿ ಕೇಂದ್ರದಲ್ಲಿ ಚಟುವಟಿಕೆ ನಡೆಸುತ್ತಿರುವ ಈ ಕೇಂದ್ರವನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‌ ಬಾಬು ಉದ್ಘಾಟಿಸಿದರು.

Advertisement

ಚುನಾವಣೆಯ ನಿರೀಕ್ಷಕ ಪ್ರಮೋದ್‌ ಕುಮಾರ್‌ ಮುಖ್ಯ ಅತಿಥಿಯಾಗಿದ್ದರು. ಕೇಂದ್ರದ ಚಟುವಟಿಕೆ ಕುರಿತು ಜಿಲ್ಲಾಧಿಕಾರಿ ನಿರೀಕ್ಷಕರಿಗೆ ಮಾಹಿತಿ ನೀಡಿದರು. ಹೆಚ್ಚುವರಿ ದಂಡನಾಧಿಕಾರಿ ಬಿಜು. ಸಿ., ಜಿಲ್ಲಾ ಹಣಕಾಸು ಅಧಿಕಾರಿ ಕೆ. ಸತೀಶನ್‌, ಎಂ.ಸಿ.ಎಂ.ಸಿ. ಸದಸ್ಯರಾದ, ಜಿಲ್ಲಾ ಕಾನೂನು ಅಧಿಕಾರಿ ಕೆ.ಪಿ.ಉಣ್ಣಿಕೃಷ್ಣನ್‌, ಜಿಲ್ಲಾ ಇನ್‌ ಪಾರ್ಮೆಟಿಕ್‌ ಅಧಿಕಾರಿ (ಎನ್‌.ಎ.ಸಿ.) ಕೆ. ರಾಜನ್‌, ಜಿ.ಬಿ.ವತ್ಸನ್‌, ಜಿಲ್ಲಾ ಕಾನೂನು ಅಧಿಕಾರಿ ಎಂ.ಸೀತಾರಾಮ, ಎಂ.ಸಿ.ಎಂ.ಸಿ. ಮೆಂಬರ್‌ ಸೆಕ್ರೆಟರಿ ಮಧುಸೂದನನ್‌ ಎಂ. ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next