Advertisement

ಮುಂಬೈನಲ್ಲೇ ನಡೆಯಲಿದೆ ವಿಂಡೀಸ್ ವಿರುದ್ಧದ ಪಂದ್ಯ !

03:41 PM Nov 21, 2019 | keerthan |

ಮುಂಬೈ: ಭಾರತದ ಪ್ರವಾಸ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭಾರತ ಮೊದಲ ಟಿ ಟ್ವೆಂಟಿ ಪಂದ್ಯವನ್ನು ಡಿಸೆಂಬರ್ ಆರರಂದು ಮುಂಬೈನ ವಾಖೆಂಡೆಯಲ್ಲಿ ನಡೆಯಲಿದೆ. ಆದರೆ ಭದ್ರತೆಯ ಕಾರಣ ಪೊಲೀಸರು ಪಂದ್ಯವನ್ನು ಸ್ಥಳಾಂತರಿಸಲು ಕೋರಿಕೊಂಡಿದ್ದರು. ಇತ್ತೀಚಿನ ಬೆಳವಣಿಗೆಯಲ್ಲಿ ಪಂದ್ಯವನ್ನು ಸ್ಥಳಾಂತರಿಸುವ ಬಗ್ಗೆ ಯಾವುದೇ ಯೋಚನೆಯಿಲ್ಲ ಎಂದು ಮುಂಬೈ ಕ್ರಿಕೆಟ್ ಸಂಸ್ಥೆ ಮೂಲಗಳು ಹೇಳಿದೆ.

Advertisement

ಡಿಸೆಂಬರ್ ಆರರಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಪುಣ್ಯ ಸ್ಮರಣೆಯ ದಿನವಾಗಿದ್ದು, ಮುಂಬೈನಲ್ಲಿ ಮಹಾಪರಿನಿರ್ವಾಣ್ ದಿವಸ್ ಆಚರಿಸಲಾಗುತ್ತದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೂ ಅದೇ ದಿನ 27 ವರ್ಷಗಳು ತುಂಬುತ್ತದೆ. ಹಾಗಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಆ ದಿನ ಭದ್ರತೆಗಾಗು ನಿಯೋಜಿಸಲಾಗುವ ಕಾರಣ ಟಿ ಟ್ವೆಂಟಿ ಪಂದ್ಯಕ್ಕೆ ಭದ್ರತೆ ಒದಗಿಸುವುದು ಕಷ್ಟ. ಹೀಗಾಗಿ ಪಂದ್ಯವನ್ನು ಮುಂಬೈಯಿಂದ ಶಿಫ್ಟ್ ಮಾಡಬೇಕೆಂದು ಪೊಲೀಸರು ಮನವಿ ಮಾಡಿದ್ದರು.

ನಾವು ಈ ಬಗ್ಗೆ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತೇವೆ. ಇದುವರೆಗೆ ಯಾವುದೇ ಬದಲಾವಣೆ ಮಾಡಿಲ್ಲ. ಎಲ್ಲವೂ ಅಂದುಕೊಂಡಂತೆ ಇದೆ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೋರ್ವರು ಖಾಸಗಿ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next