Advertisement

ಎಂ.ಬಿ.ಪಾಟೀಲ್ ಹೇಳಿಕೆಯೇ ಮುಖ್ಯ,ನೋ ಕಾಮೆಂಟ್ಸ್ : ಸಿದ್ದರಾಮಯ್ಯ ಕಿಡಿ

05:46 PM May 11, 2022 | Team Udayavani |

ಮೈಸೂರು : ಸಚಿವ ಅಶ್ವಥ್ ನಾರಾಯಣ್ ಭೇಟಿ ವಿಚಾರಕ್ಕೆ ಸಂಬಂಧಿಸಿ ಎಂ.ಬಿ.ಪಾಟೀಲ್ ಹೇಳಿಕೆಯೇ ಮುಖ್ಯ, ಅವರೇ ಸ್ಪಷಪಡಿಸಿದ್ದಾರೆ. ಎಂ ಬಿ ಪಾಟೀಲ್ ಹೇಳಿದ ಮೇಲೆ ಈ ಬಗ್ಗೆ ನೋ ಕಾಮೆಂಟ್ಸ್. ಮತ್ತೆ ಏಕೆ ಅವರು ಈ ಬಗ್ಗೆ ಕೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಐಪಿಎಸ್ ಅಧಿಕಾರಿ ಡಾ ರವೀಂದ್ರನಾಥ್ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ,ಇದೊಂದು ಅತ್ಯಂತ ದುರ್ಬಲ ಹಾಗೂ ಭ್ರಷ್ಟ ಸರ್ಕಾರ. ಪೊಲೀಸ್ ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಇಲ್ಲ. ಸಿಎಂಗೂ ಆಡಳಿತ ನಡೆಸಲು ಮುಕ್ತ ಅವಕಾಶ ಇಲ್ಲ. ಇನ್ನು ಅಧಿಕಾರಿಗಳಿಗೆ ಫ್ರೀ ಹ್ಯಾಂಡ್ ಹೇಗೆ ಕೊಡುತ್ತಾರೆ. ನಕಲಿ ಜಾತ್ರಿ ಪತ್ರದ ಬಗ್ಗೆ ತನಿಖೆ ನಡೆಸುತ್ತಿದ್ದರು. ಇದಕ್ಕಾಗಿ ವರ್ಗಾವಣೆ ಆರೋಪ ಕೇಳಿ ಬಂದಿದೆ. ಇದು ನಿಜವಾಗಿದ್ದರೆ ಇದು ಮಹಾ ಅಪರಾಧ ಎಂದರು.

ರಾಜಕೀಯ ಮೀಸಲಾತಿ ಇಲ್ಲದೆ ಚುನಾವಣೆಯೇ ನಡೆಸಬಾರದು.ಸರ್ಕಾರ ಬೇಜವಾಬ್ದಾರಿತನ ತೋರುತ್ತಿದೆ. ಈಗಾಗಲೇ ಈ ಬಗ್ಗೆ ಕ್ರಮವಹಿಸಬಹುದಿತ್ತು. ಬೇರೆ ರಾಜ್ಯಗಳ ತೀರ್ಪು ಬಂದಾಗಲೂ ಸರ್ಕಾರ ಏನು ಮಾಡಿಲ್ಲ. ಒಂದು ವೇಳೆ ರಾಜಕೀಯ ಮೀಸಲಾತಿ ಇಲ್ಲದೆ ಚುನಾವಣೆ ನಡೆದರೆ ಅದು ಅನ್ಯಾಯ. ಇದಕ್ಕೆ ನಮ್ಮ ವಿರೋಧ ಇದೆ ಎಂದರು.

ಪಿಎಸ್‌ಐ ನೇಮಕಾತಿ ಹಗರಣದಿಂದ ರಕ್ಷಣೆ ಕೋರಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಪಕ್ಷದ ಪ್ರಬಲ ನಾಯಕ ಎಂ.ಬಿ ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಡಿ.ಕೆ.  ಶಿವಕುಮಾರ್ ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next