Advertisement

ಮಂಗಳೂರು ವಕೀಲರ ಸಂಘಕ್ಕೆ ಮೇಯರ್‌ ಭೇಟಿ

07:40 AM Aug 11, 2017 | |

ಮಹಾನಗರ: ಮಂಗಳೂರು ವಕೀಲರ ಸಂಘದ ಕಚೇರಿಗೆ  ಮೇಯರ್‌ ಕವಿತಾ ಸನಿಲ್‌ ಅವರು ಭೇಟಿ ಮಾಡಿ, ವಕೀಲರ ಬೇಡಿಕೆಗಳನ್ನು ಆಲಿಸಿದರು. 

Advertisement

ಮೊದಲ ಬಾರಿಗೆ ಮೇಯರ್‌ ಆಗಿ ವಕೀಲರ ಸಂಘಕ್ಕೆ ಆಗಮಿಸಿದ ಕವಿತಾ ಸನಿಲ್‌ ಅವರನ್ನು ವಕೀಲರ ಸಂಘದ ವತಿಯಿಂದ ಸಮ್ಮಾನಿಸಲಾಯಿತು. ಜಿಲ್ಲಾ ನ್ಯಾಯಾಲಯ ವ್ಯಾಪ್ತಿಯಲ್ಲಿ ಮಂಗಳೂರು ಪಾಲಿಕೆ ವತಿಯಿಂದ ಕೈಗೊಳ್ಳಬೇಕಾದ ತುರ್ತು ಕಾಮಗಾರಿ ಹಾಗೂ ಯೋಜನೆಗಳ ಬಗ್ಗೆ ವಕೀಲರ ಸಂಘದ ವತಿಯಿಂದ ಮೇಯರ್‌ ಅವರಿಗೆ  ಮನವಿ ಸಲ್ಲಿಸಲಾಯಿತು.
 
ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಮೇಯರ್‌, ಜಿಲ್ಲಾ ನ್ಯಾಯಾಲಯ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಎಲ್ಲ ಕಾಮಗಾರಿ ಹಾಗೂ ತುರ್ತು ಕೆಲಸಗಳನ್ನು ಜರೂರಾಗಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.ಸಂಘದ ಪ್ರಮುಖರಾದ ಸೀತಾರಾಮ ಶೆಟ್ಟಿ, ಎಂ.ವಿ.ಶಂಕರ ಭಟ್‌, ಪಿ.ನಾರಾಯಣ ಪೂಜಾರಿ, ರವೀಂದ್ರನಾಥ್‌ ರೈ, ಎಂ.ಆರ್‌.ಬಲ್ಲಾಳ್‌, ಪುಷ್ಪಲತಾ, ದಿನಕರ ಶೆಟ್ಟಿ, ಒ.ಟಿ.ಭಟ್‌, ಎಂ.ಆರ್‌. ನೊರೋನ್ಹಾ , ಪದ್ಮನಾಭ ಬಿ.ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next