Advertisement

ದೇಶಾದ್ಯಂತ ಮೇ 21ರಂದು “ಉಗ್ರ ನಿಗ್ರಹ ದಿನ’ಆಚರಣೆಗೆ ಸೂಚನೆ

08:01 PM May 14, 2022 | Team Udayavani |

ನವದೆಹಲಿ:ದೇಶಾದ್ಯಂತ ಮೇ 21 ಅನ್ನು “ಭಯೋತ್ಪಾದನೆ ನಿಗ್ರಹ ದಿನ’ವಾಗಿ ಆಚರಿಸುವಂತೆ ಸೂಚಿಸಿ ಎಲ್ಲ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು, ಕೇಂದ್ರ ಸರ್ಕಾರಿ ಇಲಾಖೆಗಳು ಹಾಗೂ ಸಚಿವಾಲಯಗಳಿಗೆ ಕೇಂದ್ರ ಗೃಹ ಇಲಾಖೆ ಪತ್ರ ಬರೆದಿದೆ.

Advertisement

ಈ ನಿಟ್ಟಿನಲ್ಲಿ “ತುರ್ತು ಕ್ರಮ’ ಕೈಗೊಳ್ಳುವಂತೆಯೂ ಪತ್ರದಲ್ಲಿ ಸೂಚಿಸಲಾಗಿದೆ. “ಪ್ರತಿ ವರ್ಷ ಮೇ 21 ಅನ್ನು ಭಯೋತ್ಪಾದನೆ ನಿಗ್ರಹ ದಿನವಾಗಿ ಆಚರಿಸಬೇಕು. ಉಗ್ರವಾದವು ಹೇಗೆ ಜನಸಾಮಾನ್ಯರನ್ನು ಸಂಕಷ್ಟಕ್ಕೆ ನೂಕಿದೆ ಎಂಬುದನ್ನು ತೋರಿಸುವ ಮೂಲಕ ದೇಶದ ಯುವಕರನ್ನು ಉಗ್ರವಾದದಿಂದ, ಹಿಂಸಾಚಾರದಿಂದ ದೂರವಿಡುವಂತೆ ನೋಡಿಕೊಳ್ಳುವುದೇ ಈ ದಿನದ ಆಚರಣೆಯ ಉದ್ದೇಶವಾಗಿದೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಆ ದಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ಇತರೆ ಸಾರ್ವಜನಿಕ ಸಂಸ್ಥೆಗಳಲ್ಲಿ ಉಗ್ರ ನಿಗ್ರಹ ಶಪಥವನ್ನು ಕೈಗೊಳ್ಳಬೇಕು. ಡಿಜಿಟಲ್‌ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕವೂ ಭಯೋತ್ಪಾದನೆ ನಿರ್ಮೂಲನೆಯ ಸಂದೇಶಗಳನ್ನು ರವಾನಿಸಬೇಕು ಎಂದೂ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next