Advertisement

ಮಟ್ಟು :ಪಂಚಾಯತ್ ಚುನಾವಣೆ ಬಹಿಷ್ಕಾರದ ಕೂಗು

09:06 AM Dec 18, 2020 | Team Udayavani |
ಕಟಪಾಡಿ; ರಾಜ್ಯದ ಹಲವೆಡೆ ಗ್ರಾಮ ಪಂಚಾಯತ್‌ ಚುನಾವಣೆಗಳನ್ನು ಬಹಿಷ್ಕಾರ ಮಾಡುತ್ತಿರುವ ಸುದ್ದಿ ಕೇಳಿಬರುತ್ತಿರುವ ಬೆನ್ನಲ್ಲೇ ಉಡುಪಿ ಜಿಲ್ಲೆಯ ಕಾಪು ತಾಲೂಕು ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ವಾರ್ಡ್ ನ ಪರಿಶಿಷ್ಟರಾದ ಗೊಡ್ಡ ಸಮುದಾಯದವರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮತದಾನ ಬಹಿಷ್ಕಾರದ ಕೂಗು ಕೇಳಿ ಬರುತ್ತಿದೆ . ತಮ್ಮ ಆರಾಧ್ಯ, ಸುಮಾರು 300 ವರ್ಷಗಳ ಇತಿಹಾಸ ಇರುವ ಮಟ್ಟು ಶ್ರೀ ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನ ಮೇ 2018 ರಲ್ಲಿ ಊರ ಹಾಗು ಪರವೂರ ಭಕ್ತರ ಸಹಕಾರದೊಂದಿಗೆ ಜೀರ್ಣೋಧ್ದರ ಗೊಂಡಿದ್ದು , ಕೇವಲ ಗರ್ಭ ಗುಡಿಯ ಹಾಗು ಮುಖ ಮಂಟಪ ಕಾಮಗಾರಿ ಮಾತ್ರ ಪೂರ್ಣ ಗೊಂಡಿರುತ್ತದೆ . ಅಗ್ರಸಭೆ ಹಾಗು ಆವರಣ ಗೋಡೆ ಕಾಮಗಾರಿ ಬಾಕಿ ಇರುತ್ತದೆ . ಈ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪರಿಶಿಷ್ಟರಾದ ನಮಗೆ ಕಷ್ಟ ಸಾಧ್ಯ. ಅದರಿಂದ ನಾವು ಸರ್ಕಾರದ ಜನಪ್ರತಿನಿಧಿಗಳಿಗೆ , ಹಾಗು ಮುಜುರಾಯಿ ಇಲಾಖೆ ಗೆ ಸರಕಾರಿ ಅನುದಾನಕ್ಕೆ ಮನವಿ ಸಲ್ಲಿಸಿರುತ್ತೇವೆ. ಆದರೆ 2 ವರ್ಷ ಕಳೆದರೂ ಯಾವುದೇ ಸೂಕ್ತ ಸರಕಾರಿ ಅನುದಾನ ನಮಗೆ ಸಿಕ್ಕಿರುವುದಿಲ್ಲ ಎಂದು ಪ್ರಮುಖ ಗುರುರಾಜ್ ಅವರು ಆಕ್ರೋಶ ಹೊರಹಾಕಿ ದ್ದಾರೆ ಅಲ್ಲದೆ ನಮ್ಮ ವಾರ್ಡ್ ನಲ್ಲಿ 3 -4 ದಿವಸೊಕೊಮ್ಮ ಕುಡಿಯುವ ನೀರು ಸರಬರಾಜು ಆಗುತಿದ್ದ್ದು , ಅದಕ್ಕೂ ಪರಿಶಿಷ್ಟ ರಾದ ನಮ್ಮಿಂದ ಪಂಚಾಯತ್ ನೀರಿನ ಬಿಲ್ಲು ನ್ನು ಪ್ರತಿ ತಿಂಗಳು ಪಡೆಯುತ್ತಾರೆ. ಸುಮಾರು 50 ಪರಿಶಿಷ್ಟ ಕುಟುಂಬಗಳು ವಾಸಿಸುತ್ತಿದು ಕೆಲವರಿಗೆ ಸೂಕ್ತ ಜಾಗ ಹಾಗು ಮನೆಯ ವ್ಯವಸ್ಥೆ ಇರುವುದಿಲ್ಲ. ಅದರಿಂದ ನಮಗೆ ಸೂಕ್ತ ಸರಕಾರಿ ಜಾಗವನ್ನು ನೀಡಲು ಆಗ್ರಹಿಸುತ್ತಿದ್ದೇವೆ . ಅಲ್ಲದೆ ನಮ್ಮಲ್ಲಿ ವಿದ್ಯಾವಂತ ಯುವಕ , ಯುವಕರಿಗೆ ಕೋಟೆ ಪಂಚಾಯತ್ ನಲ್ಲಿ ಮೀಸಲು ಉದ್ಯೋಗ ಮತ್ತು ಸರಕಾರೀ ಉದ್ಯೋಗವನ್ನ್ಯು ನೀಡಲು ಆಗ್ರಹಿಸುತಿದರು. ಬೇಡಿಕೆ ಈಡೇರಿಸದಿದ್ದಲ್ಲಿ ಮುಂಬರುವ ತಾ.ಪಂ. ಹಾಗೂ ಜಿಲ್ಲಾ ಪಂಚಾಯತ್ ಮತದಾನ ಬಹಿಷ್ಕಾರದ ನಿಲುವಾಗಿದೆ ಎಂದಿದ್ದಾರೆ. ಈ ಸಂದರ್ಭ ಪ್ರಮುಖ ರಾದ ನಾಗರಾಜ್, ದಿನೇಶ್, ರಾಘು, ಪ್ರದೀಪ್, ಧನಂಜಯ ಮತ್ತಿತರ ರು ಉಪಸ್ಥಿತರಿದ್ದರು
Advertisement

Udayavani is now on Telegram. Click here to join our channel and stay updated with the latest news.

Next