Advertisement

ಮ್ಯಾಟ್ರಿಮೊನಿ ದೋಖಾ: ಯುವತಿಯ ನಯವಾದ ಮಾತಿಗೆ ಮನಸೋತು 9.95 ಲಕ್ಷ ರೂ. ಕಳೆದುಕೊಂಡ ಯುವಕ!

03:28 PM Sep 10, 2022 | Team Udayavani |

ಬೆಂಗಳೂರು: ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಯುವತಿಯ ನಯವಾದ ಮಾತಿಗೆ ಮನಸೋತ ಯುವಕನೊಬ್ಬ 9.95 ಲಕ್ಷ ರೂ. ಕಳೆದುಕೊಂಡಿದ್ದಾನೆ.

Advertisement

ಹನುಮಗಿರಿನಗರದ ನಿವಾಸಿ ಅಜಯ್‌ ಕುಮಾರ್‌ (36) ವಂಚನೆಗೊಳಗಾದವ. ಖಾಸಗಿ ಕಂಪನಿಯೊಂದರ ಉದ್ಯೋಗಿ ಅಜಯ್‌ ಆ.29ರಂದು ಮ್ಯಾಟ್ರಿಮೋನಿಯಲ್ಲಿ ತಮ್ಮ ಫೋಟೊ ಅಪ್‌ಲೋಡ್‌ ಮಾಡಿ ವಿವಾಹವಾಗಲು ವಧುವನ್ನು ಹುಡುಕುತ್ತಿದ್ದ. ಕೆಲ ದಿನಗಳ ಹಿಂದೆ ಉತ್ತರ ಭಾರತ ಮೂಲದ ಯುವತಿ ಮ್ಯಾಟ್ರಿಮೋನಿಯಲ್ಲಿ ಅಜಯ್‌ಗೆ ಸಂದೇಶ ಕಳುಹಿಸಿದ್ದಳು.

ಇದನ್ನೂ ಓದಿ: ಕುಡಿತದ ಚಟ ಬಿಡಿಸಲು ಯತ್ನಿಸಿದಕ್ಕೆ ಪಾಲಕರಿಗೆ ಚೂರಿ ಹಾಕಿ, ಎ ಸಿನಿಮಾದ ಪೋಸ್‌ ಕೊಟ್ಟ ಆರೋಪಿ

ಇದಕ್ಕೆ ಅಜಯ್‌ ಸಹ ಪ್ರತಿಕ್ರಿಯಿಸಿದ್ದ. ನಂತರ ಇಬ್ಬರೂ ಸಲುಗೆಯಿಂದ ಮಾತ ನಾಡಲಾರಂಭಿಸಿದ್ದರು. ಅಜಯ್‌ ಮೊಬೈಲ್‌ ನಂಬರ್‌ ಪಡೆದುಕೊಂಡ ಯುವತಿ ಆತನಿಗೆ ಕರೆ ಮಾಡಿ “ನಿಮ್ಮ ಪ್ರೊಫೈಲ್‌ ನನಗೆ ಬಹಳ ಇಷ್ಟವಾಗಿದೆ. ನಿಮ್ಮನ್ನು ನಾನು ನೋಡಬೇಕು. ಇದಕ್ಕಾಗಿ ದೆಹಲಿಗೆ ಬರುತ್ತಿದ್ದೇನೆ’ ಎಂದು ಹೇಳಿದ್ದಳು. ಆಕೆಯ ಮೋಹಕ ಮಾತಿಗೆ ಮರುಳಾದ ಅಜಯ್‌ ಆಕೆಯ ಸೂಚನೆಯಂತೆ ಆಕೆ ಕೊಟ್ಟ ಬ್ಯಾಂಕ್‌ ಖಾತೆಗೆ ಒಂದಿಷ್ಟು ಹಣ ಹಾಕಿದ್ದ. ಇಷ್ಟಕ್ಕೆ ಸುಮ್ಮನಾಗದ ಯುವತಿ ಸಬೂಬು ಹೇಳಿ ತನ್ನ ಖಾತೆಗೆ ಅಜಯ್‌ನಿಂದ ಮತ್ತೆ ಹಾಕಿಸಿಕೊಂಡಿದ್ದಳು. ನಿನ್ನನ್ನು ಭೇಟಿಯಾದ ಕೂಡಲೇ ಎಲ್ಲ ಹಣ ಹಿಂತಿರುಗಿಸುವುದಾಗಿ ಯುವತಿ ನಂಬಿಸಿದ್ದಳು.

ಹೀಗೆ ಹಂತ-ಹಂತವಾಗಿ ಅಜಯ್‌ ಆಕೆಯ ಬ್ಯಾಂಕ್‌ ಖಾತೆಗೆ ಒಟ್ಟು 9.95 ಲಕ್ಷರೂ. ಜಮೆ ಮಾಡಿದ್ದ. ಇದಾದ ಬಳಿಕ ಯುವತಿ ಮೊಬೈಲ್‌ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next