Advertisement
ಮನೆಮಾತು ತಮಿಳಾದರೂ ಕನ್ನಡಕ್ಕೆ ತಮ್ಮ ಸೇವೆ ಸಲ್ಲಿಸಿದರು. ಅಧಿಕಾರಿಯಾಗಿ, ಸಾಹಿತಿಯಾಗಿ ಎರೆಡೂ ಕಡೆ ಸಮತೋಲವನ್ನು ಕಾಪಾಡಿಕೊಂಡು ಶೃತಿ ಮೀರದೇ ಬದುಕು ನಡೆಸಿದರು. ಸಂದರ್ಶನವೊಂದರಲ್ಲಿ ತಮ್ಮ ಹೆಂಡತಿಯ ಸಹಾಯವನ್ನು ಮರೆಯಲು ಸಾಧ್ಯವಿಲ್ಲವೆಂದು ಹೇಳಿಕೊಂಡಿದ್ದನ್ನು ಮೆಲುಕು ಹಾಕಿದರು.
Related Articles
ಮಾಸ್ತಿ: ಡಾ.ಮಾಸ್ತಿ ಅವರ ಸಣ್ಣ ಕಥೆಗಳನ್ನು ಪ್ರಖ್ಯಾತಿ ಪಡೆದಿವೆ. ಆದರೆ, ಅವರು ಬರೆದಿರುವ ಕಾವ್ಯವನ್ನು ಸಾಹಿತ್ಯ ವಿಮರ್ಶಾ ಲೋಕ ಅಷ್ಟು ಗಮನಿಸಿಲ್ಲ ಎಂದು ಖ್ಯಾತ ಸಾಹಿತಿ ಸ.ರಘುನಾಥ್ ಹೇಳಿದರು. ಮಾಸ್ತಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಟ್ರಸ್ಟ್, ಕನ್ನಡ, ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ, ತಾಪಂನಿಂದ ಹಮ್ಮಿಕೊಂಡಿದ್ದ ಡಾ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ 131ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ಮಾತನಾಡಿದರು.
Advertisement
ಮಾಸ್ತಿ ಅವರ ಕಾವ್ಯವನ್ನು ಸಾಹಿತ್ಯ ವಿಮರ್ಶಾ ಲೋಕ ಅಷ್ಟು ಗಮನಿಸಿಲ್ಲ ಎಂಬುದೇ ದುರಂತದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಡಾ.ಮಾಸ್ತಿ ಟ್ರಸ್ಟ್ ಮಾಸ್ತಿ ಅವರ ಸಮಗ್ರ ಕಾವ್ಯವನ್ನು ಮುದ್ರಿಸಿ ಮಾಸ್ತಿ ಅವರ ಸಣ್ಣ ಕಥೆಗಳು ಎಲ್ಲಾ ಸಿಕ್ಕ ಹಾಗೆ ಅವರ ಕಾವ್ಯ ಸಿಗುವಂತೆ ಮಾಡಬೇಕು ಎಂದರು. ಸಾಹಿತಿ ಜ.ಮು.ಚಂದ್ರ ಮಾತನಾಡಿದರು. ಸಾಹಿತಿ ಡಾ.ನಾ.ಮುನಿರಾಜು ಕಾರ್ಯಕ್ರಮದ ಕುರಿತು ಮಾತನಾಡಿದರು. ಕವಿಗಳಾದ ಅಶೋಕ್ ಬಾಬು ಟೇಕಲ್, ಮಾ.ಚಿ.ನಾಗರಾಜ್, ಡಾ.ಎ.ಜಯಲಕ್ಷಿ, ಸುಮಂಗಲ ಮೂರ್ತಿ, ರೋಣೂರು ವೆಂಕಟೇಶ್, ಶ್ರೀನಾಥ್ ಅಜಾದ್, ಕೆ.ಮುನಿಕೃಷ್ಣಪ್ಪ, ಕೋಳಾಲಪ್ಪ, ಅಶ್ವಿನಿ ವೆಂಕಟೇಶ್, ವನಿತ ಅರಳೇರಿ, ವಿಕ್ರಂ ಶ್ರೀನಿವಾಸ್, ದೊಡ್ಡಿ ಪ್ರವೀಣ್, ಎ.ಜಿ.ಲಕ್ಷ್ಮಮ್ಮ, ಶಿವಪ್ರಸಾದ್, ಡಾ.ನಂಜಪ್ಪ, ಲಕ್ಕೂರು ನಾಗರಾಜ್ ಇತರರಿದ್ದರು.