Advertisement

ಪೊಲೀಸರಿಂದ ಪಥ ಸಂಚಲನ

02:54 PM Apr 25, 2020 | Suhan S |

ಗೋಕಾಕ:  ಕೋವಿಡ್ 19 ವೈರಸ್‌ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪೊಲೀಸರು ಶುಕ್ರವಾರ ನಗರದಲ್ಲಿ ಪಥ ಸಂಚಲನ ನಡೆಸಿದರು.

Advertisement

ಇಲ್ಲಿಯ ಸೋಮವಾರ ಪೇಟೆಯಲ್ಲಿ ನಗರಸಭಾ ಸದಸ್ಯೆ ಲಕ್ಷ್ಮೀ ದೇಶನೂರ ಸೇರಿದಂತೆ ಅನೇಕ ಸುಮಂಗಲಿಯರು ಆರತಿ ಬೆಳಗಿ ಅಭೂತಪೂರ್ವವಾಗಿ ಸ್ವಾಗತಿಸಿದರು. ಸಾರ್ವಜನಿಕರು ಪಥ ಸಂಚಲನ ಮೇಲೆ ಪುಷ್ಪಗಳ ಮಳೆ ಸುರಿಸಿದರು.

ಪಥ ಸಂಚಲನದಲ್ಲಿ ಪೌರಾಯುಕ್ತ ಶಿವಾನಂದ ಹಿರೇಮಠ, ಸಿಪಿಐ ಗೋಪಾಲ ರಾಠೊಡ, ಪಿಎಸ್‌ಐಗಳಾದ ಎ.ಟಿ.ಅಮ್ಮಿನಭಾಂವಿ, ನಾಗರಾಜ ಖೀಲಾರೆ, ರೋಟರಿ ಅಧ್ಯಕ್ಷ ಸೋಮಶೇಖರ ಮಗದುಮ್ಮ, ನಗರಸಭಾ ಸದಸ್ಯರು ಹಾಗೂ ಸಿಬ್ಬಂದಿ, ಆರೋಗ್ಯ ಇಲಾಖೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಕರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಮನವಿ: ಡಿವಾಯ್‌ಎಸ್‌ಪಿ ಪ್ರಭು ಡಿ.ಟಿ. ಮಾತನಾಡಿ, ಅವರು  ಕೋವಿಡ್ 19 ವೈರಸ್‌ ತಡೆಗಟ್ಟುವಲ್ಲಿ ವಿವಿಧ ಇಲಾಖೆಗಳು, ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಿದ್ದೀರಿ. ಮುಂದೆಯೂ ಇದೇ ರೀತಿ ಸಹಕಾರ ನೀಡುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next