Advertisement

ಎಸ್‌ಎಸ್‌ಕೆ ಸಮಾಜದಿಂದ ಬೃಹತ್‌ ರ್ಯಾಲಿ

04:08 PM Apr 20, 2019 | Team Udayavani |

ಗದಗ: ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರಿಗೆ ಬೆಂಬಲ ಸೂಚಿಸಿ ನಗರದಲ್ಲಿ ಎಸ್‌ಎಸ್‌ಕೆ ಸಮಾಜದಿಂದ ಗುರುವಾರ ಸಂಜೆ ಬೃಹತ್‌ ಪಾದಯಾತ್ರೆ ನಡೆಸಲಾಯಿತು.

Advertisement

ನಗರದ ಹಳೇ ಸರಾಫ್‌ ಬಜಾರ್‌ನಿಂದ ಅಂಬಾ ಭವಾನಿ ದೇವಸ್ಥಾನದಿಂದ ಚೌವಡಿ ಕೂಟ, ಟಾಂಗಾಕೂಟ, ನಾಮಜೋಶಿ ರಸ್ತೆ, ವೀರೇಶ್ವರ ಲೈಬ್ರರಿ, ಹಳೇ ಬಸ್‌ ನಿಲ್ದಾಣ, ಬ್ಯಾಂಕ್‌ ರೋಡ್‌, ಟಾಂಗಾ ಕೂಟ, ಸ್ಟೇಷನ್‌ ರಸ್ತೆ, ಗಾಂಧಿ ವೃತ್ತ ಮಾರ್ಗವಾಗಿ ಬಿಜೆಪಿ ಚುನಾವಣಾ ಸಂಪರ್ಕ ಕಚೇರಿಗೆ ತಲುಪುವ ಮೂಲಕ ಮುಕ್ತಾಯಗೊಂಡಿತು.

ಮೆರವಣಿಗೆಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಭಾರತ ಮಾತಾಕಿ ಜೈ ಎಂಬ ಘೊಷಣೆ ಕೂಗಿದರು. ಬಿಜೆಪಿ ಮುದ್ರಿಸಿದ್ದ ಕರ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಬಿಜೆಪಿಗೆ ಮತಯಾಚಿಸಿದರು.

ಇದಕ್ಕೂ ಮುನ್ನ ಜಗದಂಬಾ ದೇವವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಹುಬ್ಬಳ್ಳಿಯ ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿದರು. ಸೊಲ್ಲಾಪುರ ಮಾಜಿ ಶಾಸಕ ನರಸಿಂಗ ಮೆಲಜಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ, ನಗರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ ಭಾಂಡಗೆ, ಪ್ರಕಾಶ ಬಾಕಳೆ, ಬಿಜೆಪಿ ಶಹರ ಘಟಕದ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸುಧೀರ ಕಾಟಿಗರ, ಕಿಶನ ಮೆರವಾಡೆ, ವಿನಾಯಕ ಹಬೀಬ, ದತ್ತು ಪವಾರ, ಮಾಧುಸಾ ಮೇರವಾಡೆ, ತೋಟೋಸಾ ಭಾಂಡಗೆ, ಬಿ.ಎಚ್.ಲದ್ವಾ, ಶಂಕರ ಪವಾರ, ಅನಿಲ ಖಟವಟೆ, ಪಕ್ಕೀರಸಾ ಭಾಂಡಗೆ, ಜಯಶ್ರೀ ಖಟವಟೆ, ರೇಣುಕಾ ಕಲಬುರ್ಗಿ, ಪ್ರಶಾಂತ ಕಾಟವಾ ಹಾಗೂ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next