Advertisement

ಮೂಡಬಿದಿರೆ ಗಂಟಾಲ್ಕಟ್ಟೆ : ವಿವಾಹಿತೆ ಆತ್ಮಹತ್ಯೆ

10:58 AM Apr 12, 2018 | Team Udayavani |

ಮೂಡಬಿದಿರೆ: ಗಂಟಾಲ್ಕಟ್ಟೆ ನೀರಲ್ಕೆಯ ಅಸ್ಲಾಂ ಅವರ ಪತ್ನಿ ಖೈರುನ್ನೀಸಾ (22) ಅವರ ಮೃತದೇಹವು ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿ ವಾಸವಾಗಿರುವ ಗಂಟಾಲ್ಕಟ್ಟೆಯ ಕಲ್ಲಬೆಟ್ಟು ಸಹಕಾರಿ ಬ್ಯಾಂಕ್‌ ಕಟ್ಟಡದ ಎದುರಿನ ಬಾಡಿಗೆ ಮನೆಯಲ್ಲಿ ಬುಧವಾರ ಅಪರಾಹ್ನ ಕಂಡುಬಂದಿದೆ.

Advertisement

ವಾಹನದಲ್ಲಿ ಹಣ್ಣು, ತರಕಾರಿ ಮಾರುತ್ತಿರುವ ಅಸ್ಲಾಂ ಎರಡೂವರೆ ವರ್ಷ ಹಿಂದೆ ಅಮ್ಮುಂಜೆಯ ಖೈರು ನ್ನೀಸಾರನ್ನು ವಿವಾಹವಾಗಿದ್ದರು.

ಎಂಟು ತಿಂಗಳ ಹಿಂದಷ್ಟೇ ಗಂಟಾಲ್ಕಟ್ಟೆಯಲ್ಲಿ ದಂಪತಿ ನೆಲೆಸಿದ್ದರು. ಅವರಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದೆ. ಬುಧವಾರ ಮನೆಯಲ್ಲಿ ನಿರಂತರವಾಗಿ ಮಗು ಅಳುತ್ತಿರುವ ಕಾರಣಕ್ಕೆ ಮನೆಯ ಮಾಲಕರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿತೆನ್ನಲಾಗಿದೆ.

ಮೂಡಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತಹಶೀಲ್ದಾರ್‌ ಸಮಕ್ಷಮ ಮೃತದೇಹದ ಮಹಜರು ನಡೆಸಲಾಗಿದೆ.

ಸಂಪರ್ಕಕ್ಕೆ ಸಿಗದ ಪತಿ
ಘಟನೆಯ ಬಳಿಕ ಪತಿ ಮತ್ತು ಆತನ ಮನೆಯವರು ಸಂಪರ್ಕಕ್ಕೆ ಅಲಭ್ಯರಾಗಿದ್ದು, ಇದೊಂದು ಸಂಶ ಯಾಸ್ಪದ ಪ್ರಕರಣ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next