Advertisement
ಕಳೆದ 15 ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಸುಮಾರು 20,000ದಷ್ಟು ಜನರು ಆಗಮಿಸುತ್ತಾರೆ ಎನ್ನುತ್ತಾರೆ ಇಲ್ಲಿನ ವಿದ್ಯಾರ್ಥಿಗಳು.
ಮರದ ಕೆತ್ತನೆಯಿಂದ ತಯಾರಿಸಿದ ಪೆನ್ ಹೋಲ್ಡರ್, ಕೀಪಂಚ್, ಡೋರ್ಫಿಕ್ಸಿಂಗ್, ಕೊಳಲು, ದೇವರ ವಿಗ್ರಹಗಳು, ಮಣ್ಣಿನ ವಿಗ್ರಹ, ದೀಪಗಳು, ಬೆಡ್ಶೀಟ್ಗಳು, ಆಲಂಕಾರಿಕ ವಸ್ತುಗಳು ಹಾಗೂ ಇತರ ದಿನಬಳಕೆಯ ವಸ್ತುಗಳು ಸಹಿತ ಸುಮಾರು ನೂರಕ್ಕೂ ಅಧಿಕ ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗುತ್ತದೆ. ಇದನ್ನು ಇಲ್ಲಿನ ವಿದ್ಯಾರ್ಥಿಗಳೇ ಸಿದ್ಧಪಡಿಸುತ್ತಾರೆ ಎಂಬುದು ವಿಶೇಷ.
Related Articles
ಕುಂದಾಪುರ ತಾಲೂಕಿನ ಕನ್ಯಾನದಲ್ಲಿ 1991ರಲ್ಲಿ ನಮ್ಮ ಭೂಮಿ ಸಂಸ್ಥೆ ಪ್ರಾರಂಭವಾಗಿತ್ತು. ಅರ್ಧದಲ್ಲೆ ಶಾಲೆಯಿಂದ ಹೊರಹೋಗುವ ವಿದ್ಯಾರ್ಥಿಗಳ ಅಭಿರುಚಿಯನ್ನು ಗುರುತಿಸಿ ಇಲ್ಲಿ ಅವರಿಗೆ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಇಂದು ಹಳ್ಳಿ ಮಕ್ಕಳು ಶಾಲೆ ಬಿಟ್ಟು ನಗರಗಳತ್ತ ವಲಸೆ ಹೋಗುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಈ ಸಂಸ್ಥೆ ಆರಂಭಿಸಲಾಗಿದೆ. ಮರಗೆಲಸ, ಎಲೆಕ್ಟ್ರಿಕಲ್ಸ್, ಗಾರ್ಮೆಂಟ್ಸ್, ಬ್ಯೂಟೀಷಿಯನ್ಸ್ ಕುರಿತು ಇಲ್ಲಿ ತರಬೇತಿ ನೀಡಲಾಗುತ್ತದೆ. ಸ್ಕೂಲ್ ಆಫ್ ಕಮ್ಯೂನಿಕೇಶನ್ನ ಮೂಲಕವೂ ನಮಗೆ ಉತ್ತಮ ರೀತಿಯ ನೆರವು ಸಿಗುತ್ತಿದೆ ಎನ್ನುತ್ತಾರೆ ನಮ್ಮ ಭೂಮಿ ಸಂಸ್ಥೆಯ ಸಹಾಯಕ ನಿರ್ದೇಶಕ ಶಿವಾನಂದ ಶೆಟ್ಟಿ ಅವರು. ನಮ್ಮ ಅಂಗಡಿಯಲ್ಲಿ ಮಾರಾಟವಾದ ವಸ್ತುಗಳ ಹಣವು ನಮ್ಮ ಭೂಮಿಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿನಿಯೋಗವಾಗುತ್ತಿದೆ. ಈ ಮೂಲಕ ಇಲ್ಲಿನ ಸ್ಕೂಲ್ ಆಫ್ ಕಮ್ಯೂನಿಕೇಶನ್ ಸಂಸ್ಥೆಯು ಶಾಲಾ ಮಕ್ಕಳ ಅಭಿರುಚಿಯನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎನ್ನುತ್ತಾರೆ ಅವರು.
Advertisement
ಕಲೆ ನಮ್ಮ ಪರಂಪರೆಕಲೆ ನಮ್ಮ ಪರಂಪರೆಯಾಗಿದ್ದು, ಇದನ್ನು ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಸಹಕಾರಿಯಾಗಲಿದೆ. ಇದರಿಂದ ಲಭಿಸುವ ಹಣ ಒಳ್ಳೆಯ ಉದ್ದೇಶಕ್ಕೆ ವಿನಿಯೋಗವಾಗುತ್ತಿದೆ.
– ನೀತಿ ಎಸ್.ಹೆಗ್ಡೆ, ಪ್ರಥಮ ಬಿಎ ವಿದ್ಯಾರ್ಥಿನಿ ಹೊಸ ವಿಚಾರ ತಿಳಿಯಲು ಸಾಧ್ಯ
ಕಳೆದ ವರ್ಷವೂ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ. ಇದು ನಮ್ಮ ಶಿಕ್ಷಣಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದರಿಂದ ಹೊಸ ವಿಚಾರಗಳನ್ನು ತಿಳಿಯಲು ಸಾಧ್ಯವಾಗಿದೆ.
– ಸ್ಕೈಲಾ ಪಿರೇರಾ, ದ್ವಿತೀಯ ವರ್ಷದ ಎಂಎ ವಿದ್ಯಾರ್ಥಿನಿ ಜಾಗೃತಿ ಮೂಡಿಸುವ ಉದ್ದೇಶ
ವಿದ್ಯಾರ್ಥಿಗಳ ಕಲಾಕೌಶಲವನ್ನು ಗುರುತಿಸುವ ಉದ್ದೇಶ ಇದಾಗಿದೆ. ಈ ಮೂಲಕ ವಿದ್ಯಾರ್ಥಿಗಳ ಅಭಿರುಚಿಯನ್ನು ಪ್ರೋತ್ಸಾಹಿಸುವ ಕೆಲಸವೂ ನಡೆಯುತ್ತಿದೆ. ಇದು ಪರಿಸರ ಸ್ನೇಹಿಯಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ.
– ಡಾ| ಪದ್ಮಾ ರಾಣಿ, ಎಸ್ಒಸಿ ನಿರ್ದೇಶಕಿ