Advertisement

ಮರವಂತೆ: ಕಡಲ್ಕೊರೆತ ಅಪಾಯದಲ್ಲಿ ತೀರ ಪ್ರದೇಶ

09:10 AM Jun 18, 2019 | Team Udayavani |

ಉಪ್ಪುಂದ: ಮರವಂತೆಯ ಹೊರ ಬಂದರು ಪ್ರದೇಶದ ತೀರದಲ್ಲಿ ಕಡಲಬ್ಬರ ತೀವ್ರಗೊಂಡಿದ್ದು ಕಡಲ್ಕೊರೆತ ಉಂಟಾಗಿದೆ.

Advertisement

ಸಮುದ್ರ ತೀರದ ರಸ್ತೆ, ತೆಂಗಿನ ಮರಗಳು ಸೇರಿದಂತೆ ಮನೆಗಳು ಅಪಾಯ ಎದುರಿಸುತ್ತಿವೆ. ಅಲೆಗಳ ಅಬ್ಬರಕ್ಕೆ ನೀರು ಮನೆಯ ಅಂಗಳಕ್ಕೆ ಬರುತ್ತಿದೆೆ.

ಮಳೆಗಾಲದ ಆರಂಭದಲ್ಲಿಯೇ ಕಡಲ್ಕೊರೆತ ಪ್ರಾರಂಭವಾಗಿದೆ. ಬೃಹತ್‌ ಗಾತ್ರದ ಅಲೆಗಳು ತಡೆಗೋಡೆಯ ಕಲ್ಲುಗಳಿಗೆ ಬಡಿದು ರಸ್ತೆಗೆ ಬಂದು ಅಪ್ಪಳಿಸುತ್ತಿವೆ. ತೀರ ಪ್ರದೇಶದ ರಕ್ಷಣೆಗೆ ಹಾಕಲಾಗಿರುವ ಕಲ್ಲುಗಳು ಸಮುದ್ರ ಸೇರುತ್ತಿವೆ. ಮಳೆ ಹಾಗೂ ಗಾಳಿಯ ಅಬ್ಬರ ಹೆಚ್ಚಾದಂತೆ ಕಡಲಿನ ಅಬ್ಬರವೂ ಹೆಚ್ಚಾಗುತ್ತದೆ.

ಕಾಮಗಾರಿ ಪೂರ್ಣಗೊಳಿಸಿ
ಬೇಸಗೆಯಲ್ಲಿ ಕಡಲ್ಕೊರೆತ ಉಂಟಾಗಿ ಅಪಾಯ ಎದುರಾಗಿತ್ತು. ಇದೀಗ ಮಳೆ ಬಿರುಸುಗೊಂಡಾಗಲೇ ಕಡಲಿನ ಆರ್ಭಟವೂ ಜೋರಾಗಿದೆ. ಇದಕ್ಕೆ ಕಾರಣ ನಿರ್ಮಾಣ ಹಂತದಲ್ಲಿರುವ ಹೊರ ಬಂದರಿನ ಅಪೂರ್ಣ ಕಾಮಗಾರಿಯೇ ಎನ್ನುತ್ತಾರೆ ಸ್ಥಳೀಯರು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳ್ಳು ವಂತೆ ಕ್ರಮ ಕೈಗೊಳ್ಳ ಬೇಕು. ಈಗ ನಿರ್ಮಿಸಿರುವ ತಡೆಗೋಡೆಯ ಎತ್ತರವನ್ನು ಇನ್ನಷ್ಟು ಹೆಚ್ಚಿಸ ಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next