Advertisement

Maratha Reserve; ನನ್ನನ್ನು ಕೊಲ್ಲಲು ಫ‌ಡ್ನವೀಸ್‌ ಸಂಚು: ಜಾರಂಗೆ ಆರೋಪ

12:56 AM Feb 26, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರು ನನ್ನನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಮರಾಠಾ ಮೀಸಲು ಹೋರಾಟಗಾರ ಮನೋಜ್‌ ಜಾರಂಗೆ ಆರೋಪಿಸಿದ್ದಾರೆ.

Advertisement

ರವಿವಾರ ಜಲಾ°ದಲ್ಲಿ ಸುಮಾರು 1 ಗಂಟೆ ಕಾಲ ಮಾಡಿದ ಭಾಷಣದಲ್ಲಿ ಫ‌ಡ್ನವೀಸ್‌ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ ಜಾರಂಗೆ, “ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವಂತೆ ಕೆಲವರ ಮೇಲೆ ಒತ್ತಡ ಹಾಕಲಾಗುತ್ತಿಗೆ, ಆಮಿಷಗಳನ್ನು ಒಡ್ಡಲಾಗುತ್ತಿದೆ. ಈ ಎಲ್ಲ ಸಂಚಿನ ಹಿಂದೆ ಫ‌ಡ್ನವೀಸ್‌ ಇದ್ದಾರೆ. ಅವರು ನನ್ನನ್ನು ವಿಷ ಹಾಕಿ ಕೊಲ್ಲಲು ಯತ್ನಿಸುತ್ತಿದ್ದಾರೆ. ನಾನು ಬೇಕಿದ್ದರೆ ಈಗಲೇ ಫ‌ಡ್ನವೀಸ್‌ ಅವರ ನಿವಾಸಕ್ಕೆ ಹೋಗಲು ರೆಡಿ’ ಎಂದು ಹೇಳಿದರು.

ಈ ವೇಳೆ, ವೇದಿಕೆಯಲ್ಲಿ ಸ್ವಲ್ಪ ಕಾಲ ಗೊಂದಲ ಉಂಟಾಯಿತು. ಕೆಲವರು ಬಂದು, ಜಾರಂಗೆ ಅವರಿಂದ ಮೈಕ್ರೋಫೋನ್‌ ಕಿತ್ತುಕೊಳ್ಳಲು ಯತ್ನಿಸಿದ್ದೂ ಕಂಡುಬಂತು. ಇದೇ ವೇಳೆ, ರಾಜ್ಯದಲ್ಲಿ ಮರಾಠರ ಪ್ರಭಾವವನ್ನು ಕೊನೆಗಾಣಿಸಲು ಫ‌ಡ್ನವೀಸ್‌ ಯತ್ನಿಸುತ್ತಿದ್ದಾರೆ ಎಂದೂ ಜಾರಂಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next