Advertisement

ಮಾನ್ವಿ: ಗಾಂಜಾ ಬೆಳೆ ಪತ್ತೆ ಹಚ್ಚಿದ ಅಬಕಾರಿ ಇಲಾಖೆ ಅಧಿಕಾರಿಗಳ ತಂಡ

05:35 PM Sep 10, 2022 | Team Udayavani |

ಮಾನ್ವಿ: ತಾಲೂಕಿನ ಜಾಗೀರಪನ್ನೂರು ಗ್ರಾಮದಲ್ಲಿನ ಹತ್ತಿ ಬೆಳೆ ನಡುವೆ  ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಗಾಂಜಾವನ್ನು ಜಪ್ತಿ ಮಾಡಿಕೊಂಡು ಅರೋಪಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ವಲಯ ಅಬಕಾರಿ ನಿರೀಕ್ಷಕ ಬಸವರಾಜ ಕಾಕರಗಲ್ ತಿಳಿಸಿದರು.

Advertisement

ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ತಾಲೂಕಿನ ಜಾಗೀರ ಪನ್ನೂರು ಗ್ರಾಮದಲ್ಲಿ ಹುಚ್ಚಪ್ಪ ಎಂಬುವವರ ಹತ್ತಿಯ ಹೊಲದಲ್ಲಿ ಗಾಂಜಾ ಗಿಡಗಳನ್ನು ಬೆಳೆಯುತ್ತಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಲಾಗಿ ಜಮೀನಿನಲ್ಲಿ 17.180 ಕೆಜಿ ಅಂದಾಜು 2 ಲಕ್ಷ ಮೌಲ್ಯದ 42 ಹಸಿ ಗಾಂಜಾ ಗಿಡಗಳನ್ನು ಹಾಗೂ ಸಂಸ್ಕರಿಸಿದ 112 ಗ್ರಾಂ ಒಣ ಗಾಂಜಾ ಜಪ್ತಿ ಮಾಡಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು

ಅಬಕಾರಿ ನಿರೀಕ್ಷಕರಾದ ಕವಿತಾ, ನಾಗಣ್ಣ, ಉಪ ನಿರೀಕ್ಷಕರಾದ ಶಿವಲಿಂಗ ಸ್ವಾಮಿ, ಈರಮ್ಮ ಹಾಗೂ ಅಬಕಾರಿ ಪೇದೆಗಳಾದ ಆಂಜೀನೆಯ್ಯ, ವೆಂಕೋಬ, ಮೂರ್ತಿ, ನಿಂಗಪ್ಪ, ಶಿವಾನಂದ, ಮಹಿಬೂಬ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next