Advertisement

ಇನ್ನು ಎರಡೇ ದಿನದಲ್ಲಿ ಮಹಾರಾಷ್ಟ್ರಕ್ಕೆ ಮುಂಗಾರು ಪ್ರವೇಶ : ಹವಾಮಾನ ಇಲಾಖೆ

11:19 PM Jun 09, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ಮುಂಗಾರು ಮಾರುತವು ನಿಧಾನವಾಗಿ ಚುರುಕುಗೊಳ್ಳುತ್ತಿದ್ದು, ಇನ್ನೆರಡು ದಿನಗಳಲ್ಲೇ ಮಹಾರಾಷ್ಟ್ರವನ್ನು ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Advertisement

ಜೂ.10-11ರಂದು ಅರುಣಾ ಚಲ ಪ್ರದೇಶದಲ್ಲಿ, ಮುಂದಿನ 5 ದಿನಗಳ ಕಾಲ ಮೇಘಾಲಯದಲ್ಲಿ ಧಾರಾಕಾರ ಮಳೆಯಾಗಲಿದೆ ಎಂಬ ಮುನ್ನೆಚ್ಚರಿಕೆ ಯನ್ನೂ ಇಲಾಖೆ ನೀಡಿದೆ.

ಈ ನಡುವೆ ದಿಲ್ಲಿ-ಎನ್‌ಸಿಆರ್‌ ಮತ್ತು ವಾಯವ್ಯ ಭಾರತದ ಇತರ ಭಾಗಗಳಲ್ಲಿ ಜೂ.15ರ ವರೆಗೂ ಬಿಸಿಲಿನ ಝಳ ಮುಂದುವರಿಯುತ್ತದೆ ಎಂದೂ ಹವಾಮಾನ ಇಲಾಖೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next