Advertisement

ಮುಂಗಾರು ಇಳಿಕೆ: ಬಿತ್ತನೆಗೆ ಹಿನ್ನಡೆ : ವಾಡಿಕೆಗಿಂತ ಶೇ.7ರಷ್ಟು ಕಡಿಮೆ ಮಳೆ

12:20 AM Jul 18, 2021 | Team Udayavani |

ಹೊಸದಿಲ್ಲಿ: ಈ ಬಾರಿಯ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಸದೇ ಇರುವುದು, ನೇರವಾಗಿ ಕೃಷಿ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಈ ವರ್ಷದಲ್ಲಿ ಈವರೆಗೆ ವಾಡಿಕೆ­ಗಿಂತ ಶೇ. 7ರಷ್ಟು ಕಡಿಮೆ ಮಳೆಯಾಗಿದೆ. ಕೆಲವು ಭಾಗದಲ್ಲಿ ಮಳೆಯಾಗಿದ್ದರೆ, ಇನ್ನೂ ಕೆಲವು ಕಡೆ ಮಳೆಗಾಗಿ ರೈತರು ಕಾದು ಕುಳಿತಿ­ದ್ದಾರೆ. ಇದರಿಂದಾಗಿ, ಬಿತ್ತನೆಯ ಪ್ರಮಾಣ ಇಳಿಮುಖವಾಗಿದೆ.

Advertisement

ಕೇಂದ್ರ ಕೃಷಿ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಜು. 16ರ ಹೊತ್ತಿಗೆ ದೇಶಾದ್ಯಂತ 61.19 ಮಿಲಿಯನ್‌ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ, ಹತ್ತಿ ಮತ್ತು ಸೋಯಾಬೀನ್‌ಗಳ ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 12ರಷ್ಟು ಇಳಿಮುಖವಾದಂತಾಗಿದೆ. ಕಳೆದ ಮುಂಗಾರುವಿನಲ್ಲಿ ದೇಶಾದ್ಯಂತ 5.37 ಮಿಲಿಯನ್‌ ಹೆಕ್ಟೇರ್‌ ಪ್ರದೇಶಗಳಲ್ಲಿ ಕಬ್ಬು ಬಿತ್ತನೆ ಮಾಡಲಾಗಿತ್ತು. ಈ ಬಾರಿಯೂ ಅಷ್ಟೇ ಪ್ರದೇಶದಲ್ಲಿ ಕಬ್ಬು ಬಿತ್ತನೆ ಮಾಡಲಾಗಿದೆ. ಇನ್ನು, ಹತ್ತಿಯ ಬಿತ್ತನೆ ಕೇವಲ 9.84 ಮಿಲಿಯನ್‌ ಹೆಕ್ಟೇರ್‌ ಪ್ರದೇಶದಲ್ಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 13ರಷ್ಟು ಕಡಿಮೆಯಾಗಿದೆ. ಅಕ್ಕಿ ರಫ್ತಿನಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಆದರೆ ಬಿತ್ತನೆ ಇಳಿಮುಖವಾಗಿ ರುವುದರಿಂದ ಅಕ್ಕಿ ಉತ್ಪಾದನೆ ಕಡಿಮೆಯಾಗಿ ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

Advertisement

Udayavani is now on Telegram. Click here to join our channel and stay updated with the latest news.

Next