Advertisement

Manipura: ವ್ಯಕ್ತಿ ನೇಣಿಗೆ ಶರಣು; ಪ್ರಕರಣ ದಾಖಲು

08:31 PM Oct 10, 2024 | Team Udayavani |

ಕಾಪು: ಮಣಿಪುರ ನಿವಾಸಿ ಕೃಷ್ಣ (74) ಅವರು ಮನೆ ಪಕ್ಕದ ಪಾಳು ಮನೆಯ ಮರದ ಜಂತಿಗೆ ಹಗ್ಗ ಬಿಗಿದು ನೇಣಿಗೆ ಶರಣಾದ ಘಟನೆ ಬುಧವಾರ ಸಂಜೆ ನಡೆದಿದೆ.

Advertisement

ಮೃತ ಕೃಷ್ಣ ಅವರು ಪಕ್ಕದ ಮನೆಗೆ ಹೋಗಿ ಚಾ ಕುಡಿದುಕೊಂಡು ಬರುವುದಾಗಿ ಹೇಳಿ ಹೋದವರು ಮರಳಿ ಬಂದಿರಲಿಲ್ಲ. ಹುಡುಕಾಡಿದಾಗ ಮನೆ ಪಕ್ಕದ ಪಾಳು ಬಿದ್ದ ಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next