Advertisement

Manipal ಗಸ್ತು ನಿರತ ಪೊಲೀಸ್‌ ಸಿಬಂದಿಗೆ ಸ್ಕೂಟರ್‌ ಢಿಕ್ಕಿ

12:22 AM Jul 01, 2024 | Team Udayavani |

ಮಣಿಪಾಲ: ಚೆಕ್‌ಪೋಸ್ಟ್‌ನಲ್ಲಿ ಗಸ್ತು ನಿರತ ಪೊಲೀಸ್‌ ಸಿಬಂದಿಗೆ ಅತಿವೇಗದಲ್ಲಿ ಬಂದ ಸ್ಕೂಟರ್‌ ಢಿಕ್ಕಿ ಹೊಡೆದಿದೆ.

Advertisement

ಮಣಿಪಾಲ ಠಾಣೆಯ ತಿಮ್ಮಯ್ಯ ಮತ್ತು ಆನಂದಯ್ಯ ಅವರು ಮಣಿಪಾಲದ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಿರಣ್‌ ಮತ್ತು ಸಂಗಮೇಶ್‌ ಅವರೂ ಜತೆಗಿದ್ದರು. ರವಿವಾರ ಮುಂಜಾನೆ ಸಿಂಡಿಕೇಟ್‌ ಸರ್ಕಲ್‌ ಕಡೆಯಿಂದ – ಉಪೇಂದ್ರ ಪೈ ಸರ್ಕಲ್‌ ಕಡೆಗೆ ಹೋಗುವ ವಿ.ಎಸ್‌. ಆಚಾರ್ಯ ರಸ್ತೆಯಲ್ಲಿ ತಿಮ್ಮಯ್ಯ ಮತ್ತು ಆನಂದಯ್ಯ ಅವರು ರಸ್ತೆಗೆ ಬ್ಯಾರಿಕೇಡ್‌ ಹಾಕಿ ವಾಹನಗಳ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಚೇತನ್‌ ಎಂಬವರು ತನ್ನ ಸ್ಕೂಟರ್‌ನಲ್ಲಿ ಅಭಿಷೇಕ್‌ ಅವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಅತಿವೇಗದಲ್ಲಿ ಬಂದಿದ್ದಾರೆ. ನಿಲ್ಲಿಸುವಂತೆ ಸೂಚಿಸಿದರೂ ನಿರ್ಲಕ್ಷಿಸಿ ತಿಮ್ಮಯ್ಯ ಅವರಿಗೆ ಢಿಕ್ಕಿ ಹೊಡೆದಿದ್ದಾರೆ.

ಪರಿಣಾಮ ತಿಮ್ಮಯ್ಯ ಸಹಿತ ಸ್ಕೂಟರ್‌ ಸವಾರರಿಬ್ಬರೂ ಕೆಳಗೆ ಬಿದ್ದಿದ್ದು, ಗಾಯವಾಗಿದೆ. ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next