Advertisement
“ಸಾಮಾಜಿಕ ಸೇವೆಯ ಬದ್ಧತೆ ಅಗತ್ಯ. ಮಹಿಳೆಯರು ಮನೆ ಜವಾಬ್ದಾರಿ ನಿರ್ವಹಿಸುವ ಜತೆಗೆ ತಮ್ಮ ಕಾರ್ಯಕ್ಷೇತ್ರ ಹಾಗೂ ಸಾಮಾಜಿಕವಾಗಿಯೂ ಸಮರ್ಥವಾಗಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಅನಾಥ ಮಕ್ಕಳಿಗೆ ಆಶ್ರಯ, ಶಿಕ್ಷಣ ನೀಡುವುದಕ್ಕಾಗಿ ರೂಪುಗೊಂಡ “ನಮ್ಮ ಭೂಮಿ’ ಸಂಸ್ಥೆಯ ಜತೆಗೆ ಕೈ ಜೋಡಿಸಿ ಸಾಮಾಜಿಕ ಸೇವಾ ಕಾರ್ಯದಲ್ಲಿಯೂ ತೊಡಗಿಸಿಕೊಂಡಿರುವ ಎಸ್ಒಸಿ ಮಾದರಿ ಕೆಲಸ ಮಾಡುತ್ತಿದೆ. ಇಂತಹ ಮಕ್ಕಳನ್ನು ನಾನು ಮುಂದೆ ಖುದ್ದಾಗಿ ಭೇಟಿಯಾಗಲಿದ್ದೇನೆ’ ಎಂದು ಹೆಪ್ಸಿಬಾ ರಾಣಿ ಹೇಳಿದರು.
ನಮ್ಮ ಭೂಮಿಯ ಕಾರ್ಯನಿರ್ವಾಹಕ ನಿರ್ದೇಶಕ ದಾಮೋದರ ಆಚಾರ್ಯ, ಎಸ್ಒಸಿಯ ಉಪನ್ಯಾಸಕಿ ಮಂಜುಳಾ ವೆಂಕಟ ರಾಘವನ್ ಉಪಸ್ಥಿತರಿದ್ದರು. ಪ್ರಿಯಾಂಕ ರಾಯ್ ನಿರ್ವಹಿಸಿ ಶುಚಿ ರೈ ವಂದಿಸಿದರು. ನಮ್ಮಂಗಡಿಯಲ್ಲಿ ಏನೇನಿವೆ?
ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಕಲಾಕೃತಿಗಳು, ಬೆಡ್ಶೀಟ್, ಅಲಂಕಾರಿಕ ವಸ್ತುಗಳು, ರೆಡಿಮೇಡ್ ಬಟ್ಟೆಗಳು, ಆಹಾರ ತಿನಿಸುಗಳು, ನೂತನ ಟ್ರೆಂಡ್ಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಿರುವ ಆಭರಣಗಳು ಹೀಗೆ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟವಿದೆ.