Advertisement

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

07:55 PM Apr 30, 2024 | Team Udayavani |

ಮಣಿಪಾಲ: ಬ್ಯಾಂಕ್‌ನಲ್ಲಿ ಹಣವಿಲ್ಲದಿದ್ದರೂ ವ್ಯಕ್ತಿಯೊಬ್ಬರಿಗೆ ಚೆಕ್‌ ನೀಡಿ ಬೌನ್ಸ್‌ ಆದ ಘಟನೆ ನಡೆದಿದೆ.

Advertisement

ಮಣಿಪಾಲದ ಸುನೀಲ್‌ ಅವರಿಗೆ ಒಎಲ್‌ಎಕ್ಸ್‌ನಲ್ಲಿ ಶ್ರೀನಿವಾಸ ಅವರ ಪರಿಚಯವಾಗಿ ಕಾರು ಮಾರಾಟ ಮಾಡುವ ಬಗ್ಗೆ ಮಾತುಕತೆ ನಡೆದಿತ್ತು. ಅದರಂತೆ ಎ. 8ರಂದು ಕಾರಿನ ಬಗ್ಗೆ ಫೋನ್‌ನಲ್ಲಿ ಮಾತುಕತೆ ಮಾಡಿ 1,60,000 ರೂ. ನಗದು ನೀಡಿ ಕಾರನ್ನು ತೆಗೆದುಕೊಂಡು ಹೋಗುವುದಾಗಿ ಒಪ್ಪಿಕೊಂಡಿದ್ದರು.

ಎ. 9ರಂದು ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ ಬಳಿ ಆರೋಪಿ ಟಿ. ಶ್ರೀನಿವಾಸ ಅವರು ಸುನಿಲ್‌ ಅವರಿಗೆ 10 ಸಾವಿರ ರೂ. ನಗದು ನೀಡಿ ಬಳಿಕ ಗೂಗಲ್‌ ಪೇ ಮೂಲಕ 40 ಸಾವಿರ ರೂ. ನೀಡಿದ್ದರು. ಬಳಿಕ 2 ಚೆಕ್‌ ನೀಡಿ ಎ. 9ರ ರಾತ್ರಿ ಕಾರನ್ನು ತೆಗೆದುಕೊಂಡು ಹೋಗಿದ್ದರು.

ಎ. 10ರಂದು ಸುನೀಲ್‌ ಅವರು ಬ್ಯಾಂಕ್‌ಗೆ ಹೋಗಿ ಆರೋಪಿ ಟಿ. ಶ್ರೀನಿವಾಸ ಕೊಟ್ಟ ಚೆಕ್‌ ಅನ್ನು ಪರಿಶೀಲಿಸಿದಾಗ 2 ಚೆಕ್‌ಗೆ ಸಂಬಂಧಿಸಿದ ಖಾತೆಯಲ್ಲಿ ಹಣವಿರಲಿಲ್ಲ. ಈ ಬಗ್ಗೆ ಆತನಿಗೆ ಕರೆ ಮಾಡಿ ವಿಚಾರಿಸಿದಾಗ ಆತ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾನೆ ಎಂದು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next