Advertisement

ಪಚ್ಚು ಎಂದರೆ ನೀನೇನಾ…? ಮಣಿಪಾಲದ ಪಬ್ ನಲ್ಲಿ ಗಲಾಟೆ, ಹಲ್ಲೆ.. ದೂರು, ಪ್ರತಿದೂರು

09:58 AM Jan 03, 2023 | Team Udayavani |

ಮಣಿಪಾಲ : 80 ಬಡಗಬೆಟ್ಟುವಿನ ಪಬ್‌ವೊಂದರಲ್ಲಿ ನಡೆದ ಘಟನೆಗೆ ಸಂಬಂಧಿಸಿ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

Advertisement

ಕಾಡಬೆಟ್ಟುವಿನ ಪ್ರಶಾಂತ್‌ ಅವರು ಪಬ್‌ನಲ್ಲಿರುವಾಗ ಅಪರಿಚಿತರು ಬಂದು “ಪಚ್ಚು ಎಂದರೆ ನೀನೇನಾ? ಹೊರಗೆ ಬಾ ಎಂದು ಹೇಳಿ ಹೊರಗೆ ಹೋಗಿ ಲೇಕ್‌ವ್ಯೂ ಹೊಟೇಲ್‌ ಕಡೆಗೆ ಹೋದಾಗ ಪ್ರಶಾಂತ್‌ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದರು. ಈ ವೇಳೆ ಪರಿಚಯದ ರತನ್‌ ಮತ್ತು ಇತರ ಇಬ್ಬರು ಸೇರಿ ಪ್ರಶಾಂತ್‌ ಅವರ ತಲೆಗೆ, ಮುಖಕ್ಕೆ, ಬೆನ್ನಿಗೆ ಬೇಸ್‌ ಬ್ಯಾಟ್‌ ನಿಂದ ಹಲ್ಲೆ ಮಾಡಿದ್ದಾರೆ. ಮತ್ತೋರ್ವ ಚೂರಿಯಿಂದ ಚುಚ್ಚಿ ಗಾಯಗೊಳಿಸಿದ್ದಾನೆ. ಈ ವೇಳೆ ಜನ ಸೇರಿದಾಗ ಆರೋಪಿಗಳು ಪ್ರಶಾಂತ್‌ನಿಗೆ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಪ್ರತಿದೂರು
ಕೊಡವೂರಿನ ರತನ್‌ ಅವರು ಮಣಿಪಾಲದ ಲೇಕ್‌ವ್ಯೂ ಬಳಿ ಬಂದು ಲೋಯ್ಡನಿಗೆ ಕರೆ ಮಾಡಿದಾಗ ಬೇರೆ ಯಾರೋ ಪೋನ್‌ ಸ್ವೀಕರಿಸಿ ನಾನು ಪಚ್ಚು ಯಾನೆ ಪ್ರಶಾಂತ್‌ ಮಾತನಾಡೋದು ಎಂದು ಹೇಳಿ ಹಣವನ್ನು ಪಡೆದುಕೊಳ್ಳಲು ಸಿಗ್ಮಾ ಬಾರ್‌ ಬಳಿ ಇರುವ ರಿಂಗ್‌ ಜೋನ್‌ಗೆ ಬರಲು ತಿಳಿಸಿದ್ದರು. ಅಲ್ಲಿಗೆ ಹೋದಾಗ ಪ್ರಶಾಂತ ಯಾನೆ ಪಚ್ಚು ಚೂರಿಯಿಂದ ತಿವಿಯಲು ಬಂದಾಗ ಎದೆಯ ಎಡ ಬದಿಗೆ ಚೂರಿ ತಾಗಿ ಗಾಯವಾಗಿದೆ. ಆರೋಪಿ ಪ್ರಶಾಂತ, ರತನ್‌ನನ್ನು ಅಟ್ಟಿಸಿಕೊಂಡು ಓಡುವಾಗ ಎಡವಿ ಬಿದ್ದು ಆತನ ಕಣ್ಣಿಗೂ ಗಾಯವಾಗಿದೆ ಎಂದು ಪ್ರತಿದೂರಿನಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next