Advertisement

Manipal: ರೈಲು ನಿಲ್ದಾಣದಲ್ಲಿಟ್ಟಿದ್ದ ಬ್ಯಾಗ್‌ ಕಳವು

09:01 PM Sep 01, 2024 | Team Udayavani |

ಮಣಿಪಾಲ: ರೈಲು ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬ್ಯಾಗ್‌ ಹಾಗೂ ಅದರೊಳಗಿದ್ದ ವಸ್ತುಗಳು ಕಳವಾಗಿದೆ.

Advertisement

ಶಿವಮೊಗ್ಗದ ಜಯರಾಮ ಅವರು ಆ. 30ರಂದು ರಾತ್ರಿ ಕೇರಳದಿಂದ ಓಕಾ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆ. 31ರಂದು ಬೆಳಗ್ಗೆ ಉಡುಪಿ ರೈಲ್ವೇ ನಿಲ್ದಾಣದ ಪುರುಷರ ವಿಶ್ರಾಂತಿ ಕೊಠಡಿಯ ಒಳಗೆ ಕುರ್ಚಿಯಲ್ಲಿ ತನ್ನ ಬ್ಯಾಗ್‌ ಇಟ್ಟು ಬ್ಯಾಗ್‌ ಮೇಲೆ ತನ್ನ ಶರ್ಟ್‌ ಹಾಗೂ ಪ್ಯಾಂಟ್‌ ಇಟ್ಟು ಸ್ನಾನಗೃಹಕ್ಕೆ ಹೋಗಿದ್ದರು. ವಾಪಸು ಬರುವಾಗ ಬ್ಯಾಗ್‌ ಕಳವಾಗಿತ್ತು.

ಬ್ಯಾಗ್‌ನಲ್ಲಿ ಲ್ಯಾಪ್‌ಟಾಪ್‌, ಮೊಬೈಲ್‌, 2,800 ರೂ.ನಗದು, ಎಟಿಎಂ ಕಾರ್ಡ್‌, ಚೆಕ್‌ ಪುಸ್ತಕ ಹಾಗೂ ಇತರ ದಾಖಲೆಗಳು ಇದ್ದವು ಎಂದು ಜಯರಾಮ ಅವರು ಮಣಿಪಾಲ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next