Advertisement

ಕೇಂದ್ರ ಮಾಜಿ ಸಚಿವ,ಕಾಂಗ್ರೆಸ್‌ ಹಿರಿಯ ನಾಯಕ ಮಾಣಿಕ್‌ ರಾವ್‌ ಗಾವಿತ್‌ ನಿಧನ

08:07 PM Sep 17, 2022 | Shreeram Nayak |

ಮುಂಬೈ: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ಹಿರಿಯ ನಾಯಕ ಮಾಣಿಕ್‌ರಾವ್‌ ಗಾವಿತ್‌(87) ಅವರು ಶನಿವಾರ ಮಹಾರಾಷ್ಟ್ರದ ನಾಸಿಕ್‌ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

Advertisement

ಮಾಣಿಕ್‌ರಾವ್‌ ಅವರು 1980ರಿಂದ 2009ರವರೆಗೆ ಒಟ್ಟು 9 ಬಾರಿ ನಂದೂರ್ಬಾರ್‌ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.

ಮನಮೋಹನ್‌ ಸಿಂಗ್‌ ನೇತೃತ್ವದ ಸರ್ಕಾರದಲ್ಲಿ ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವರಾಗಿ ಹಾಗೂ ಸಾಮಾಜಿಕ ನ್ಯಾಯ ಇಲಾಖೆಯ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಮಾಣಿಕ್‌ರಾವ್‌ ಅವರ ಪುತ್ರ ಭರತ್‌, ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದ ಹಿನ್ನೆಲೆ 2019ರಲ್ಲಿ ಬಿಜೆಪಿ ಸೇರಿದ್ದರು. ಅವರ ಪುತ್ರಿ ನಿರ್ಮಲಾ, ಎರಡು ಬಾರಿ ಕಾಂಗ್ರೆಸ್‌ನಿಂದ ಶಾಸಕಿಯಾಗಿದ್ದು, ಶಿವಸೇನೆಗೆ ಪಕ್ಷಾಂತರಗೊಂಡು ಚುನಾವಣೆಯಲ್ಲಿ ಸೋತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next