Advertisement

Vitla: ಮಾಣಿಗುತ್ತು ಧರ್ಮಚಾವಡಿ: ಪುನಃ ಪ್ರತಿಷ್ಠೆ, ಬ್ರಹ್ಮಕಲಶ

01:19 AM Jan 19, 2024 | Team Udayavani |

ವಿಟ್ಲ: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ ಹಾಗೂ ಮಾಣಿಗುತ್ತು ಭಂಡಾರದಮನೆ ಶ್ರೀ ಉಳ್ಳಾಲ್ತಿ, ಬೆಮ್ಮೆರ್‌, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ಧರ್ಮಚಾವಡಿಯ ಜೀರ್ಣೋದ್ಧಾರ ಪೂರ್ಣವಾಗಿದ್ದು, ಬ್ರಹ್ಮಕಲಶಕ್ಕೆ ಸಿದ್ಧತೆ ನಡೆಯುತ್ತಿದೆ.

Advertisement

ಜ. 20ರಿಂದ 25ರ ವರೆಗೆ ಮಾಣಿ ಶ್ರೀ ಉಳ್ಳಾಲ್ತಿ ಮಾಡದಲ್ಲಿ ವೇ|ಮೂ| ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವ, ಕೂಡುಕಟ್ಟಿನ ಯಜಮಾನತ್ವದಲ್ಲಿ ದೈವಗಳ ಧರ್ಮಚಾವಡಿಯಲ್ಲಿ ಪುನಃ ಪ್ರತಿಷ್ಠೆ, ಬ್ರಹ್ಮಕಲಶ ಹಾಗೂ ಫೆ. 5ರಂದು ಭಂಡಾರಯೇರಿ ಫೆ. 6ರಂದು ಕಾಲಾವಧಿ ಮೆಚ್ಚಿ ಜಾತ್ರೆ ನಡೆಯಲಿದೆ.

ಜ. 20ರಂದು ಬೆಳಗ್ಗೆ 10ಕ್ಕೆ ಭಜನೆ, 11ಕ್ಕೆ ಉಗ್ರಾಣ ಮುಹೂರ್ತ, ಮಧ್ಯಾಹ್ನ ಗಂಟೆ 1.30ರಿಂದ ಅರೆಬೆಟ್ಟು, ಕಲ್ಲಡ್ಕ, ಸೂರಿಕುಮೇರು, ಮಾಣಿ, ಕೊಡಾಜೆ ಮಾರ್ಗವಾಗಿ ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆ ಧರ್ಮಚಾವಡಿಗೆ ತಲುಪಲಿದೆ.

ಜ. 21ರಂದು ಗಣಪತಿ ಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಭಜನೆ, ನೃತ್ಯಾಂಜಲಿ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಜ. 22ರಂದು ಚಂಡಿಕಾ ಹೋಮ, ಜ. 23ರಂದು ಧಾರ್ಮಿಕ ವಿಧಿ, ಶ್ರೀ ಉಳ್ಳಾಲ್ತಿ ಮಾಡದಲ್ಲಿ ಬ್ರಹ್ಮಕಲಶ, ಮಹಾಪೂಜೆ, ಜ. 24ರಂದು ಧಾರ್ಮಿಕ ವಿಧಿ ನಡೆಯಲಿದೆ. ಜ. 25ರಂದು ಮಾಣಿಗುತ್ತು ಧರ್ಮಚಾವಡಿಯಲ್ಲಿ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶ, ಅನ್ನಸಂತರ್ಪಣೆ, ಸಂಜೆ 5.30ರಿಂದ ಧಾರ್ಮಿಕ ಸಭೆ ನಡೆಯಲಿದ್ದು, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರೂ ಆಡಳಿತ ಮೊಕ್ತೇಸರರೂ ಆಗಿರುವ ಎಂ. ಸಚಿನ್‌ ರೈ ಮಾಣಿಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಶ್ರೀ ವೇ|ಮೂ| ನೀಲೇಶ್ವರ ಪದ್ಮನಾಭ ತಂತ್ರಿಯವರು, ಮಹೇಶ್‌ ಮುನಿಯಂಗಳ, ಅನಂತ ಭಟ್‌ ಪಳನೀರು ಉಪಸ್ಥಿತರಿರುತ್ತಾರೆ.

ಇತಿಹಾಸ
ತುಳುನಾಡಿನ ಪುಣ್ಯಭೂಮಿ ಯಾದ ಸುಳ್ಳಮಲೆ, ಬಳ್ಳಮಲೆ ಬೆಟ್ಟದ ತೀರ್ಥಸ್ನಾನ ಬಹಳ ಪ್ರಸಿದ್ಧಿ ಪಡೆದಿದೆ. ಇದೇ ಸುಳ್ಳಮಲೆ ಬೆಟ್ಟದ ತಪ್ಪಲಿನಲ್ಲಿ ಕಂಬಳ ಮತ್ತು ಬಾಕಿಮಾರು ಗದ್ದೆಗಳ ಪ್ರಾಕೃತಿಕ ಪರಿಸರದಲ್ಲಿ ಧರ್ಮ ಚಾವಡಿ ಕಂಗೊಳಿಸುತ್ತದೆ. ಈ ಧರ್ಮ ಚಾವಡಿಗೆ ಅನೇಕ ವರ್ಷಗಳ ಇತಿಹಾಸವಿದ್ದು ಶ್ರೀ ಉಳ್ಳಾಲ್ತಿ, ಬೆಮ್ಮೆರ್‌, ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ನೆಲೆಯಾಗಿದೆ.

Advertisement

ಚಾವಡಿ ಜೀರ್ಣಾವಸ್ಥೆ ಯಲ್ಲಿರುವುದನ್ನು ಮನಗಂಡು 20 ವರ್ಷಗಳ ಹಿಂದೆ ಹಳೆಯದನ್ನು ಕೆಡವಿ ನೂತನ ಚಾವಡಿ ನಿರ್ಮಿಸಿ, ಬ್ರಹ್ಮಕಲಶ ನಡೆಸಲಾಗಿತ್ತು. ಮತ್ತೆ ನಡೆದ ಪ್ರಶ್ನೆ ಚಿಂತನೆಯಲ್ಲಿ ದೈವಗಳ ನುಡಿಯ ಪ್ರಕಾರ ಗತಕಾಲದ ವೈಭವದಂತೆ ಚಾವಡಿಯನ್ನು ಮರು ನಿರ್ಮಾಣ ಮಾಡಬೇಕು ಎನ್ನುವ ಸಂಕಲ್ಪದಂತೆ ವೇ|ಮೂ| ನೀಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಅನುಜ್ಞಾ ಕಲಶ, ಭೂಮಿ ಪೂಜೆ, ಜೀರ್ಣೋದ್ಧಾರ ಕಾರ್ಯ ಆರಂಭಗೊಂಡಿತ್ತು. ವಾಸ್ತುಶಿಲ್ಪಿ ಮಹೇಶ್‌ ಮುನಿಯಂಗಳ ನಿರ್ದೇಶನದಂತೆ ಭಕ್ತರ ಧನಸಹಾಯ ಮತ್ತು ಶ್ರಮ ಸೇವೆಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ಇದೀಗ ಧರ್ಮ ಚಾವಡಿ ಎದ್ದು ನಿಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next