Advertisement

Mangaluru ವೈನ್‌ ಶಾಪ್‌ನಲ್ಲಿ ಕೊಲೆ ಯತ್ನ: ದೂರು ದಾಖಲು

09:19 PM Aug 14, 2023 | Team Udayavani |

ಮಂಗಳೂರು: ವೈನ್‌ ಶಾಪ್‌ನಲ್ಲಿ ವ್ಯಕ್ತಿಯೋರ್ವನ ಕುತ್ತಿಗೆಗೆ ಬ್ಲೇಡ್‌ನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.

Advertisement

ಮಹೇಶ್‌ ಇರಿತಕ್ಕೊಳಗಾದವರು. ನಗರದ ಮೋರ್ಗನ್ಸ್‌ಗೇಟ್ ನಲ್ಲಿರುವ ವೈನ್‌ ಶಾಪ್‌ಗೆ ಮಧ್ಯಾಹ್ನ 2.30ಕ್ಕೆ ಬಂದಿದ್ದ ಆರೋಪಿ ಯಶವಂತ್‌ ಅಲ್ಲಿಯೇ ಇದ್ದ ಮಹೇಶ್‌ ಅವರಿಗೆ ಹಳೆ ದ್ವೇಷದ ಕಾರಣಕ್ಕೆ ಜೀವಬೆದರಿಕೆ ಹಾಕಿ ಹೊರಗಡೆ ಹೋಗಿದ್ದ. ಸ್ವಲ್ಪ ಹೊತ್ತಿನಲ್ಲೇ ವಾಪಸ್‌ ಬಂದು ಮಹೇಶನ ಕುತ್ತಿಗೆಗೆ ಬ್ಲೇಡ್‌ನಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ.

ಈ ಬಗ್ಗೆ ವೈನ್‌ ಶಾಪ್‌ ಮ್ಯಾನೇಜರ್‌ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next