Advertisement

Mangaluru; ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

08:27 PM Apr 25, 2023 | Team Udayavani |

ಮಂಗಳೂರು: ಮಂಗಳೂರು ಉತ್ತರ ಪೊಲೀಸ್‌ ಠಾಣಾ ವ್ಯಾಪ್ತಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕಣ್ಣೂರು ದಯಂಬು ಬಳ್ಳೂರು ಗುಡ್ಡೆ ಹೌಸ್‌ ನಿವಾಸಿ ನುಮಾನ್‌ ಯಾನೇ ಕೆ.ನುಮಾನುಲ್ಲ ಬೀರನ್‌ ಬಂಧಿತ ಆರೋಪಿ. ಮಂಗಳವಾರ ಉತ್ತರ ಠಾಣಾ ಪೊಲೀಸ್‌ ನಿರೀಕ್ಷಕರು ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

ಈತನ ಮೇಲೆ ಮಂಗಳೂರು ಉತ್ತರ ಠಾಣೆ, ಗ್ರಾಮಾಂತರ ಠಾಣೆ, ಪೂರ್ವ ಠಾಣೆ, ದಕ್ಷಿಣ ಠಾಣೆ, ಮೂಡುಬಿದಿರೆ, ಬಂಟ್ವಾಳ, ಪೂಂಜಾಲಕಟ್ಟೆ ಠಾಣೆಗಳಲ್ಲಿ ಒಟ್ಟು 11 ಪ್ರಕರಣಗಳಿವೆ.

 

Advertisement

Udayavani is now on Telegram. Click here to join our channel and stay updated with the latest news.

Next