Advertisement

Mangaluru: ರಸ್ತೆ ಬದಿ ನಿಂತಿದ್ದ ಲಾರಿಗೆ ಸ್ಕೂಟರ್‌ ಢಿಕ್ಕಿ: ಸವಾರರಿಗೆ ಗಾಯ

08:13 PM Oct 14, 2024 | Team Udayavani |

ಮಂಗಳೂರು: ರಾ.ಹೆ.73ರ ಕಣ್ಣೂರು ಹಳೆ ಚೆಕ್‌ಪೋಸ್ಟ್‌ ಬಳಿ ಶುಕ್ರವಾರ ರಾತ್ರಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಟ್ರೇಲರ್‌ ಲಾರಿಗೆ ಸ್ಕೂಟರ್‌ ಢಿಕ್ಕಿ ಹೊಡೆದು ಸವಾರ ಮತ್ತು ಸಹ ಸವಾರ ಗಾಯಗೊಂಡಿದ್ದಾರೆ.

Advertisement

ರಾತ್ರಿ ಸುಮಾರು 10 ಗಂಟೆ ವೇಳೆಗೆ ಘಟನೆಗೆ ನಡೆದಿದ್ದು, ಸತ್ಯರಾಮ್‌ ಮತ್ತು ಶ್ಯಾಮ್‌ ಸುಂದರ್‌ ಗಾಯಗೊಂಡವರು. ಅತ್ತಾವರದಿಂದ ಮೇರ್ಲಪದವು ವೇಳೆ ಸಾಗುತ್ತಿದ್ದಾಗ ಸವಾರ ಸತ್ಯರಾಮ್‌ ನಿರ್ಲಕ್ಷ್ಯದ ಹಾಗೂ ದುಡುಕುತನದ ಸ್ಕೂಟರ್‌ ಚಲಾಯಿಸಿ ಲಾರಿಗೆ ಢಿಕ್ಕಿ ಹೊಡೆದಿದ್ದಾನೆ. ಇಬ್ಬರೂ ರಸ್ತೆಗೆ ಬಿದ್ದಿದ್ದು ಸತ್ಯರಾಮ್‌ ತೀವ್ರಗಾಯಗೊಂಡಿದ್ದು, ಪಡೀಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ಯಾಮ್‌ ಸುಂದರ್‌ಗೆ ತರುಚಿದ ಗಾಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಂಚಾರ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next