Advertisement
ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕರಾದ ಸತೀಶ್ ಸೈಲ್, ದಿನಕರ ಶೆಟ್ಟಿ, ಕಾಸರಕೋಡು ಪಂಚಾಯತ್ ಅಧ್ಯಕ್ಷರಾದ ಮಂಕಾಳಿ ಪ್ರಕಾಶ್ ಹರಿಜನ್ ಭಾಗವಹಿಸಲಿದ್ದಾರೆ.
ಕೊಂಕಣಿ ಸಾಹಿತ್ಯ ವಿಭಾಗ-ಮಾರ್ಸೆಲ್ ಎಂ. ಡಿ’ಸೋಜಾ ಮಂಗಳೂರು, ಕಲಾ ವಿಭಾಗ-ಹ್ಯಾರಿ ಫೆರ್ನಾಂಡಿಸ್ ಮುಂಬಯಿ, ಜಾನಪದ-ಅಶೋಕ್ ದಾಮು ಕಾಸರಕೋಡ ಆಯ್ಕೆಯಾಗಿದ್ದಾರೆ. ಪುಸ್ತಕ ಪುರಸ್ಕಾರಕ್ಕಾಗಿ ಕವನ ವಿಭಾಗ-ಬಂಟ್ವಾಳದ ಮೇರಿ ಸಲೋಮಿ ಡಿ’ಸೋಜಾ ಅವರ “ಅಟ್ವೋ ಸುರ್’, ಸಣ್ಣಕತೆ ವಿಭಾಗ-ಫಾ| ರೊಯ್ಸನ್ ಫೆರ್ನಾಂಡಿಸ್ ಹಿರ್ಗಾನ್ ಅವರ “ಪಯ್ಲಿ ಭೆಟ್’ ಹಾಗೂ ಭಾಷಾಂತರ ವಿಭಾಗ-ಸ್ಟೀಫನ್ ಮಸ್ಕರೇನ್ಹಸ್(ಹೇಮಾಚಾರ್ಯ) ಅವರ “ಎಕ್ಲೊ ಎಕ್ಸುರೊ’ ಕೃತಿಗಳು ಆಯ್ಕೆಯಾಗಿವೆ. ಗೌರವ ಪ್ರಶಸ್ತಿ 50,000 ರೂ. ಹಾಗೂ ಪುಸ್ತಕ ಪುರಸ್ಕಾರ 25,000 ರೂ. ನಗದು ಒಳಗೊಂಡಿದೆ.