Advertisement

Mangaluru ಏಣಿಗೆ ವಿದ್ಯುತ್‌ ಸ್ಪರ್ಶಿಸಿ ಪೈಂಟರ್‌ ಸಾವು

08:11 PM Dec 06, 2023 | Team Udayavani |

ಮಂಗಳೂರು: ಏಣಿ ಮೂಲಕ ವಿದ್ಯುತ್‌ ಪ್ರವಹಿಸಿ ಕಾರ್ಮಿಕ ಮೃತಪಟ್ಟ ಘಟನೆ ಅಳಪೆ ಗ್ರಾಮದ ಶಿಲ್ಪ ಪಡ್ಪುವಿನಲ್ಲಿ ಸಂಭವಿಸಿದೆ. ಬಂಟ್ವಾಳ ಫ‌ರಂಗಿಪೇಟೆ ಅರ್ಕುಳ ನಿವಾಸಿ ಜೈನುದ್ದೀನ್‌ ಅಬ್ದುಲ್‌ ರೆಹಮಾನ್‌ (47) ಮೃತಪಟ್ಟವರು.

Advertisement

ಅವರು ಡಿ. 4ರಂದು ಹೆನ್ರಿ ಡಿ’ಸೋಜಾ ಅವರ ಮಾಲಕತ್ವದ ಮನೆಯಲ್ಲಿ ಮೇಲ್ಚಾವಣಿ ಬಳಿ ಕಬ್ಬಿಣದ ಏಣಿ ಮೇಲೆ ನಿಂತು ಪೈಂಟಿಂಗ್‌ ಮಾಡುತ್ತಿದ್ದಾಗ ಪಕ್ಕದಲ್ಲಿದ್ದ ಹೈಟೆನ್ಶನ್‌ ವೈರ್‌ ತಾಗಿ ವಿದ್ಯುತ್‌ ಪ್ರವಹಿಸಿ ಕೆಳಗೆ ಕುಸಿದು ಬಿದ್ದರು. ಅವರ ಜತೆ ಕೆಲಸ ಮಾಡುತ್ತಿದ್ದ ರಾಜೇಶ್‌ ಮತ್ತು ಬಾಲಕೃಷ್ಣ ಅವರು ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ಫ‌ಲಕಾರಿಯಾಗದೆ ರೆಹಮಾನ್‌ ಅವರು ಡಿ. 5ರಂದು ಬೆಳಗ್ಗೆ ಮೃತಪಟ್ಟಿದ್ದಾರೆ.

ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next