Advertisement

Mangaluru ಅಧಿಕ ಲಾಭದ ಆಮಿಷ: 78 ಲ.ರೂ. ವಂಚನೆ

12:22 AM Mar 18, 2024 | Team Udayavani |

ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆನ್‌ಲೈನ್‌ ಸ್ಟಾಕ್‌ ಟ್ರೇಡಿಂಗ್‌ ಮತ್ತು ಪಾರ್ಟ್‌ ಟೈಮ್‌ ಜಾಬ್‌ ಹೆಸರಿನಲ್ಲಿ ಇಬ್ಬರಿಗೆ ಒಟ್ಟು 78 ಲ.ರೂ. ವಂಚಿಸಲಾಗಿದೆ.

Advertisement

ನಗರದ ಅಶೋಕ ನಗರದ ನಿವಾಸಿಯೋರ್ವರು ಫೇಸ್‌ಬುಕ್‌ ನೋಡುತ್ತಿದ್ದಾಗ ಅದರಲ್ಲಿ ಆನ್‌ಲೈನ್‌ ಸ್ಟಾಕ್‌ ಟ್ರೇಡಿಂಗ್‌ ಆ್ಯಪ್‌ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂಬ ಸಂದೇಶವಿತ್ತು. ಅದರಲ್ಲಿದ್ದ ಲಿಂಕ್‌ ತೆರೆದು ವಾಟ್ಸ್‌ ಆ್ಯಪ್‌ ಗ್ರೂಪ್‌ವೊಂದಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಅದರಲ್ಲಿ ಬಂದ ಸೂಚನೆಯಂತೆ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದರು. ಆದರೆ ಯಾವುದೇ ಲಾಭಾಂಶ ನೀಡಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಲಾಭಾಂಶ ನೀಡಬೇಕಾದರೆ ತೆರಿಗೆ ಪಾವತಿ ಮಾಡಬೇಕೆಂದು ಸೂಚಿಸಲಾಯಿತು ಅದನ್ನು ನಂಬಿ ಮತ್ತಷ್ಟು ಹಣ ಹೂಡಿಕೆ ಮಾಡಿದರು. ಆದರೆ ಅವರಿಗೆ ಯಾವುದೇ ಹಣ ವಾಪಸ್‌ ನೀಡಲಿಲ್ಲ. ಅವರಿಂದ ಜ.16ರಿಂದ ಫೆ.3ರ ವರೆಗೆ ಒಟ್ಟು 39.40 ಲ.ರೂ.ಗಳನ್ನು ಅಪರಿಚಿತರು ಹೂಡಿಕೆ ನೆಪದಲ್ಲಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ದೂರುದಾರರ ವಾಟ್ಸ್‌ ಅಪ್‌ ಸಂಖ್ಯೆಗೆ ಅಪರಿಚಿತರು ಸಂದೇಶ ಕಳುಹಿಸಿ ಪಾರ್ಟ್‌ ಟೈಂ ಉದ್ಯೋಗವಾಗಿ ಗೂಗಲ್‌ ರಿವೀವ್‌ ಟಾಸ್ಕ್ ಮಾಡುವಂತೆಯೂ ಅಧಿಕ ಲಾಭಾಂಶ ನೀಡುವುದಾಗಿಯೂ ತಿಳಿಸಿದರು. ಅದನ್ನು ನಂಬಿದ ದೂರುದಾರರು ಟೆಲಿಗ್ರಾಂ ಆ್ಯಪ್‌ ಸೇರ್ಪಡೆಯಾಗಿ ಟಾಸ್ಕ್ನ ಭಾಗವಾಗಿ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದರು. ಆದರೆ ಅವರಿಗೆ ಯಾವುದೇ ಹಣ ನೀಡಲಿಲ್ಲ. ಜ.25ರಿಂದ ಫೆ.21ರ ವರೆಗೆ ಒಟ್ಟು 39,38,139 ರೂ.ಗಳನ್ನು ಅಪರಿಚಿತರು ವರ್ಗಾಯಿಸಿ ವಂಚಿಸಿದ್ದಾರೆ ಎಂದು ನಗರದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next